TV10 Kannada Exclusive

ಪ್ರಿಯತಮೆ ಆತ್ಮಹತ್ಯೆ…ಪ್ರಿಯತಮ ನೇಣಿಗೆ…ಸಾವಿನಲ್ಲೂ ಒಂದಾದ ಪ್ರೇಮಿಗಳು…

ಮೈಸೂರು,ಜು25,Tv10 ಕನ್ನಡ ಪ್ರಿಯತಮೆ ಆತ್ಮಹತ್ಯೆಗೆ ಶರಣಾದ ಹಿನ್ನಲೆ ಪ್ರಿಯತಮನೂ ನೇಣಿಗೆ ಶರಣಾದ ದುರಂತ ಘಟನೆ ಮೈಸೂರಿನಲ್ಲಿ ನಡೆದಿದೆ.ಮೋನಿಕಾ(20) ಹಾಗೂ ಮನು(22) ಮೃತ ಪ್ರೇಮಿಗಳು.ಹತ್ತಿರದ ಸಂಭಂಧಿಗಳಾಗಿದ್ದ ಮಂಡಕಳ್ಳಿ ಗ್ರಾಮದ ನಿವಾಸಿ ಮೋನಿಕಾ ಹಾಗೂ ಮೈಸೂರಿನ ಜ್ಯೋತಿನಗರದ ಮನು ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದರು.ಮನೆಯಲ್ಲಿ ಇಬ್ಬರಿಗೂ ಮದುವೆ ಮಾಡಲು ಕುಟುಂಬಸ್ಥರು ತೀರ್ಮಾನಿಸಿದ್ದರು.ಇತ್ತೀಚೆಗೆ ಪ್ರೇಮಿಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಭಿನ್ನಾಭಿಪ್ರಾಯ ಬಂದಿದೆ.ಇಬ್ಬರ ನಡುವೆ ಸಣ್ಣ ಗಲಾಟೆ ಆಗಿದೆ.ಇದರಿಂದ ಬೇಸತ್ತ ಮೋನಿಕಾ ದಟ್ಟಗಳ್ಳಿಯ ಕೆಲಸ ಮಾಡುತ್ತಿದ್ದ
Read More

ವಾರಣಾಸಿಯ ಗಂಗಾರತಿ ಮಾದರಿಯಲ್ಲಿ ಕಾವೇರಿಗೆ ಆರತಿ…ಸಚಿವ ಡಿ.ಕೆ ಶಿವಕುಮಾರ್…

ಮಂಡ್ಯ,ಜು22,Tv10 ಕನ್ನಡರೈತರ ಜೀವನಾಡಿಯಾಗಿರುವ ಕಾವೇರಿ ತಾಯಿಗೆ ಪುಣ್ಯ ಕ್ಷೇತ್ರ ವಾರಣಾಸಿಯಲ್ಲಿ ಮಾಡುವ ಗಂಗಾರತಿ ಮಾದರಿಯಲ್ಲಿ ಕಾವೇರಿ ಮಾತೆಗೆ ಆರತಿ ಮಾಡಲು ಚಿಂತಿಸಲಾಗುತ್ತಿದೆ ಎಂದುಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.ಇಂದು ಕೃಷ್ಣರಾಜಸಾಗರ ಅಣೆಕಟ್ಟಿನ ಪರಿಶೀಲನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.ಕಾವೇರಿ ಆರತಿಯನ್ನು ಪ್ರಾರಂಭಿಸಲು ಮಂಡ್ಯ ಹಾಗೂ ಕೊಡಗು ಜಿಲ್ಲೆಯ ಸ್ಥಳೀಯ ಶಾಸಕರು ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳ ತಂಡ ರಚಿಸಿ ಕಾವೇರಿ ಆರತಿ ಪ್ರಾರಂಭಿಸಲು ಒಂದು ತಿಂಗಳೊಳಗೆ ವರದಿ ನೀಡುವಂತೆ
Read More

ಚಿಕಾಗೋ ದಲ್ಲಿ ಗೀತಾ ಉತ್ಸವ…ಗಣಪತಿಶ್ರೀಗಳ ನೇತೃತ್ವದಲ್ಲಿ ಅದ್ದೂರಿ ಕಾರ್ಯಕ್ರಮ…

ಮೈಸೂರು,ಜು21,Tv10 ಕನ್ನಡಚಿಕಾಗೋದ ನ್ಯೂ ಅರೆನಾದಲ್ಲಿ ನಡೆದ ಗೀತಾ ಉತ್ಸವ ಮನಸೂರೆಗೊಂಡಿದೆ.ಮೈಸೂರಿನ ಅವಧೂತ ದತ್ತ ಪೀಠದಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಯುಎಸ್ ನ ಇಲಿನಾಯಸ್ ನ ಚಿಕಾಗೋದ ನ್ಯೂ ಅರೆನಾದಲ್ಲಿ ಕಾರ್ಯಕ್ರಮ‌ಅದ್ದೂರಿಯಿಂದ ನೆರವೇರಿದೆ.ಎಸ್ ಜಿ ಎಸ್ ಗೀತಾ ಫೌಂಡೇಶನ್ ಮತ್ತು ಕೃಷ್ಣ ದತ್ತ ಹನುಮಾನ್ ದೇವಸ್ಥಾನ ವತಿಯಿಂದ ಅತಿದೊಡ್ಡ ಯುಎಸ್ ಗೀತಾ ಉತ್ಸವವನ್ನು ಆಯೋಜಿಸಲಾಗಿತ್ತು.ಕೇವಲ 10 ತಿಂಗಳಿನಲ್ಲಿ ವಿಧ್ಯಾರ್ಥಿಗಳು ಲ ಗೀತೆಯ ಎಲ್ಲಾ 700 ಶ್ಲೋಕಗಳನ್ನು ಕಂಠಪಾಠ
Read More

ಕೊನೆಗೂ ಎಚ್ಚೆತ್ತ ಜನಪ್ರತಿನಿಧಿಗಳು…ಜನರ ಸಂಕಷ್ಟ ಆಲಿಸಿದ ಶಾಸಕ ದರ್ಶನ್ ಧೃವನಾರಾಯಣ್…ಸಭೆಗೆ ಮಾತ್ರ ಸೀಮಿತವಾದ ಸಂಸದ ಸುನಿಲ್ ಬೋಸ್…

ನಂಜನಗೂಡು,ಜು21,Tv10 ಕನ್ನಡಕಪಿಲೆಯ ಪ್ರವಾಹಕ್ಕೆ ತತ್ತರಿಸಿರುವ ನಂಜನಗೂಡು ಜನರ ಸಂಕಷ್ಟಕ್ಕೆ ಶಾಸಕ ದರ್ಶನ್ ಧೃವನಾರಾಯಣ್ ಸ್ಪಂದಿಸಿದ್ದಾರೆ.ಆದ್ರೆ ಸಂಸದ ಸುನಿಲ್ ಬೋಸ್ ರವರು ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆದು ಕಾಲ್ಕಿತ್ತಿದ್ದಾರೆ.ಸುನಿಲ್ ಬೋಸ್ ರವರ ನಡೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.ಕಬಿನಿ ಜಲಾಶಯದಿಂದ ಹೊರಹರಿವು ಹೆಚ್ಚಾದ ಹಿನ್ನಲೆ ಕಪಿಲೆಯ ನದಿ ಪಾತ್ರದಲ್ಲಿರು ಜನ ತತ್ತರಿಸಿದ್ದಾರೆ.ತಗ್ಗು ಪ್ರದೇಶಗಳಿಗೆ ನುಗ್ಗಿ ನೀರು ಆಸ್ತಿಪಾಸ್ತಿಗಳನ್ನ ಅಪೋಷನ ತೆಗೆದುಕೊಂಡಿದೆ.ಮನೆ ಮಠಗಳಿಂದ ಹೊರಗುಳಿದ ಜನನಿರಾಶ್ರಿತರಾಗಿ ಗಂಜಿ ಕೇಂದ್ರ
Read More

ಒಂದೇ ಸ್ಥಾನದಲ್ಲಿ 5 ವರ್ಷ ಅವಧಿ ಪೂರೈಸಿ ಮುಂದುವರೆಯುತ್ತಿರುವ ಅಧಿಕಾರಿ/ನೌಕರರ ಮೇಲೆ ಸರ್ಕಾರದ ಕಣ್ಣು…ಪಟ್ಟಿ ನೀಡುವಂತೆ ಸಿಎಂ ಸೂಚನೆ…

ಒಂದೇ ಸ್ಥಾನದಲ್ಲಿ 5 ವರ್ಷ ಅವಧಿ ಪೂರೈಸಿ ಮುಂದುವರೆಯುತ್ತಿರುವ ಅಧಿಕಾರಿ/ನೌಕರರ ಮೇಲೆ ಸರ್ಕಾರದ ಕಣ್ಣು…ಪಟ್ಟಿ ನೀಡುವಂತೆ ಸಿಎಂ ಸೂಚನೆ…ಮೈಸೂರು,ಜು11,Tv10 ಕನ್ನಡಒಂದೇ ಹುದ್ದೆ ಅಥವಾ ಸ್ಥಾನದಲ್ಲಿ 5 ವರ್ಷ ಅವಧಿ ಮೀರಿ ಕೆಲಸ ಮುಂದುವರೆಸಿರುವ ಅಧಿಕಾರಿ/ನೌಕರರ ವಿವರಗಳನ್ನ ನೀಡುವಂತೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಲಾಗಿದೆ.ಅಂತಹವರ ವಿರುದ್ದ ದೂರುಗಳು ಬಂದಿದ್ದರೂ ವಿವರ ನೀಡುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯ ತಿಳಿಸಿದ್ದಾರೆ.ಅಲ್ಲದೆ ಜನರ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳು
Read More

ಮೊದಲ ಆಷಾಢ ಶುಕ್ರವಾರ…25 ಸಾವಿರ ಭಕ್ತರಿಗೆ ಮೈಸೂರ್ ಪಾಕ್ ವಿತರಣೆ…

ಮೈಸೂರು,ಜು11,Tv10 ಕನ್ನಡಮೊದಲ ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ವಿತರಿಸಲು 25 ಸಾವಿರ ಮೈಸೂರು ಪಾಕ್ ತಯಾರಾಗಿದೆ.ಪ್ರತಿ ವರ್ಷ ಆಷಾಢ ಮಾಸದ ಮೊದಲ ಶುಕ್ರವಾರದಂತೆ ಈ ಬಾರಿಯೂ ಚಾಮುಂಡಿ ಬೆಟ್ಟದಲ್ಲಿ 100 ಅಡಿ ರಸ್ತೆಯ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ 25000 ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗುತ್ತದೆ.ಅಲ್ಲದೆ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಅನ್ನ ಸಂತರ್ಪಣೆಯ ಜೊತೆಗೆ ಮೈಸೂರು ಪಾಕ್ ವಿತರಿಸಲಾಗುತ್ತದೆ. ಹೀಗಾಗಿ ಇಂದು ನಿತ್ಯಾನಂದ ಕಲ್ಯಾಣ ಮಂಟಪದಲ್ಲಿಮೈಸೂರುಪಾಕ್ ತಯಾರಿಸಿಲಾಗಿದೆ. ಬೆಳಿಗ್ಗೆ
Read More

ದರ್ಶನ್ ಕ್ರೇಜ್:ಬಿಡುಗಡೆ ವರೆಗೂ ಚಪ್ಪಲಿ ಧರಿಸುವುದಿಲ್ಲ…ಮುಡಿ ಕೊಡುತ್ತೇನೆ…ಸಹನಟ ಧನುಷ್ ಹರಕೆ…

ಮೈಸೂರು,ಜು10,Tv10 ಕನ್ನಡಕೊಲೆ ಆರೋಪದ ಹಿನ್ನಲೆ ಜೈಲುಹಕ್ಕಿಯಾದ ಡಿಬಾಸ್ ದರ್ಶನ್ ಬಿಡುಗಡೆಗಾಗಿ ಸಹನಟ ಧನುಷ್ ಹರಕೆ ಹೊತ್ತಿದ್ದಾರೆ.ದರ್ಶನ್ ಬಿಡುಗಡೆಯಾಗುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ದರ್ಶನ್ ಕಟ್ಟಾ ಅಭಿಮಾನಿ ಆಗಿರುವ ಸಹ ನಟ ಧನುಷ್ ಶಪಥ ಮಾಡಿ ಚಪ್ಪಲಿ ಬಿಟ್ಟು ಕಾರು ಹತ್ತುವವಿಡಿಯೋ ವೈರಲ್ ಆಗಿದೆ. ದರ್ಶನ್‌ಗಾಗಿ ತಿರುಪತಿ ತಿಮ್ಮಪ್ಪನಲ್ಲಿ ಹರಕೆ ಧನುಷ್ ಬಿಡುಗಡೆಯಾದ ದಿನ ಮುಡಿ ಕೊಡುವುದಾಗಿ ಹರಕೆ ಹೊತ್ತಿದ್ದಾರೆ.ಈ‌ ಹಿಂದೆ ದರ್ಶನ್‌ಗಾಗಿ ಕಣ್ಣೀರು ಹಾಕಿದ್ದ ಧನುಷ್ ಇದೀಗ
Read More

ಸ್ವಾತಂತ್ರದಿನಾಚರಣೆ ವೇಳೆ ಸರ್ಕಾರಿ ಸಂಸ್ಥೆಗಳಲ್ಲಿ ಮಹಾತ್ಮಗಾಂಧೀಜಿ ಫೋಟೋ ಜೊತೆಗೆ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಇಡುವಂತೆ ಸುತ್ತೋಲೆ…

ಸ್ವಾತಂತ್ರದಿನಾಚರಣೆ ವೇಳೆ ಸರ್ಕಾರಿ ಸಂಸ್ಥೆಗಳಲ್ಲಿ ಮಹಾತ್ಮಗಾಂಧೀಜಿ ಫೋಟೋ ಜೊತೆಗೆ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಇಡುವಂತೆ ಸುತ್ತೋಲೆ… ಮೈಸೂರು,ಜು8,Tv10 ಕನ್ನಡ ಸ್ವಾತಂತ್ರ ದಿನಾಚರಣೆ ವೇಳೆ ಸರ್ಕಾರಿ ಶಾಲಾ ಕಾಲೇಜು,ಸರ್ಕಾರಿ ಕಚೇರಿಗಳು ಹಾಗೂ ಸರ್ಕಾರದ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳಲ್ಲಿ ಮಹಾತ್ಮಗಾಂಧಿ ಫೋಟೋ ಜೊತೆಗೆ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನ ಕಡ್ಡಾಯವಾಗಿ ಇಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.ಅಲ್ಲದೆ ನವೆಂಬರ್ 26 ಸಂವಿಧಾನ ದಿನಾಚರಣೆ ಸಂಧರ್ಭದಲ್ಲೂ ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ಕಡ್ಡಾಯವಾಗಿ ಇಡುವಂತೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದಾರೆ…
Read More

ಕೆಸರು ಗದ್ದೆಯಂತಾದ ರಸ್ತೆ…ನಾಟಿ ಮಾಡಿ ಆಕ್ರೋಷ ವ್ಯಕ್ತಪಡಿಸಿದ ಹಾಡಿ ನಿವಾಸಿಗಳು…

ಎಚ್.ಡಿ.ಕೋಟೆ,ಜು7,Tv10 ಕನ್ನಡಹಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಕೆಸರುಗದ್ದೆಯಂತಾದ ಹಿನ್ನಲೆ ನಾಟಿ ಮಾಡಿ ಸ್ಥಳೀಯರು ಆಕ್ರೋಷ ವ್ಯಕ್ತಪಡಿಸಿದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಕೆಎಡತೊರೆಯಲ್ಲಿ ನಡೆದಿದೆ.ರಸ್ತೆ ಅವ್ಯವಸ್ಥೆಯಿಂದ ಬೇಸೆತ್ತು ರಸ್ತೆ ಮಧ್ಯದಲ್ಲೇ ನಾಟಿ ಮಾಡಿ ಹಾಡಿವಾಸಿಗಳು ಆಕ್ರೋಷ ವ್ಯಕ್ತಪಡಿಸಿದ್ದಾರೆ.ಅಣ್ಣೂರು ಗ್ರಾಮ ಪಂಚಾಯ್ತಿಗೆ ಸೇರಿದ ಎಡತೊರೆ ಹಾಡಿ ಇಂದಿಗೂ ಸಾರಿಗೆ ಸಂಪರ್ಕದಿಂದ ವಂಚಿತವಾಗಿದೆ.ಶಾಲಾ ಕಾಲೇಜು ಆಸ್ಪತ್ರೆ ಸೇರಿದಂತೆ ದೈನದಿನ ಜೀವನ ನಿರ್ವಹಣೆಹೆ ಕಾಲು ನಡಿಗೆಯಲ್ಲೇ ನಡೆದು ಬರಬೇಕಾದ ದುಃಸ್ಥಿತಿ ಇಲ್ಲಿನವರದ್ದು.ಕಳೆದ ವರ್ಷ ಚುನಾವಣೆ ಸಂದರ್ಭದಲ್ಲಿ
Read More
ಕೆ.ಆರ್.ಸಾಗರ ಹಿನ್ನೀರಿನ ನದಿ ಪಾತ್ರಕ್ಕೆ ಅಕ್ರಮ ತಡೆಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತ…ಒತ್ತುವರಿದಾರನಿಗೆ ಖಡಕ್ ವಾರ್ನಿಂಗ್… ಕೆ.ಆರ್.ಎಸ್,ಜೂ27,Tv10 ಕನ್ನಡ ಕೆ.ಆರ್.ಎಸ್ ಅಣೆಕಟ್ಟೆಯ ಉತ್ತರ ಭಾಗದ ಸಮೀಪದಲ್ಲಿ ನದಿ ಪಾತ್ರದಲ್ಲಿ ಒತ್ತುವರಿ ಮಾಡಿಕೊಂಡು ತಡೆಗೋಡೆ ನಿರ್ಮಾಣ ಕಾಮಗಾರಿಗೆ  ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.ಅಕ್ರಮವಾಗಿ ಹಿನ್ನೀರಿಗೆ ತಡೆಗೋಡೆ ನಿರ್ಮಿಸುತ್ತಿರುವ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಿದ್ದಾರೆ.ತಡೆಗೋಡೆ ಕಾಮಗಾರಿಯನ್ನ ಸ್ಥಗಿತಗೊಳಿಸಿದ್ದಾರೆ.Tv10 ಕನ್ನಡ ವಾಹಿನಿ ವರದಿಯ ಫಲಶೃತಿ ಇದಾಗಿದೆ. ಕೃಷ್ಣರಾಜಸಾಗರ ಅಣೆಕಟ್ಟೆ ಯ ಉತ್ತರ ಭಾಗದಲ್ಲಿನ ಸರ್ವೆ
Read More