TV10 Kannada Exclusive

ಕರ್ತವ್ಯ ಲೋಪ…ಬೋಗಾದಿ ಚೆಕ್ ಪೋಸ್ಟ್ ಸಿಬ್ಬಂದಿಗಳ ಅಮಾನತಿಗೆ ಜಿಲ್ಲಾಧಿಕಾರಿಗಳಿಂದ ಆದೇಶ…

ಮೈಸೂರು,ಏ2,Tv10 ಕನ್ನಡ ಚುನಾವಣೆ ಹಿನ್ನಲೆ ಬೋಗಾದಿ ಚೆಕ್ ಪೋಸ್ಟ್ ನಲ್ಲಿ ನಿಯುಕ್ತಿಗೊಳಿಸಲಾಗಿರುವ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುವಲ್ಲಿ ಲೋಪವೆಸಗಿರುವ ಹಿನ್ನಲೆ ಅಮಾನತುಗೊಳಿಸುವಂತೆ ಹಾಗೂ ಇಲಾಖಾ ವಿಚಾರಣೆ ನಡೆಸಿ  ಕ್ರಮ ಕೈಗೊಳ್ಳುವಂತೆ ಮೈಸೂರು ಕೊಡಗು ಲೋಕಸಭಾ ಕ್ಷೇತದ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ಆದೇಶಿಸಿದ್ದಾರೆ.ನಿನ್ನೆ ರಾತ್ರಿ ಜಿಲ್ಲಾಧಿಕಾರಿಗಳು ಸುಮಾರು 10.30 ರ ವೇಳೆಯಲ್ಲಿ ಬೋಗಾದಿ ಚೆಕ್ ಪೋಸ್ಟ್ ಬಳಿ ಪರಿಶೀಲನೆಗೆ ತೆರಳಿದಾಗ ಸಿಬ್ಬಂದಿಗಳು ಸೂಕ್ತವಾಗಿ ಕರ್ತವ್ಯ ನಿರ್ವಹಿಸದಿರುವುದು ಕಂಡುಬಂದಿದೆ.ಯಾವುದೇ ವಾಹನಗಳನ್ನ ತಡೆದು ತಪಾಸಣೆ
Read More

ರಾಜ್ಯದಲ್ಲಿ 18 ರಿಂದ 20 ಸ್ಥಾನ ಗೆಲ್ಲುತ್ತೇವೆ…ಸಿಎಂ ಸಿದ್ದರಾಮಯ್ಯ ವಿಶ್ವಾಸ…

ಮೈಸೂರು,ಏ1,Tv10 ಕನ್ನಡ ಅಭಿವೃದ್ದಿ ವಿಚಾರದಲ್ಲಿ ಬಿಜೆಪಿ ಇದುವರೆಗೆ ಹೇಳಿರುವುದೆಲ್ಲಾ ಸುಳ್ಳು.ಅವರು 200 ಕ್ಷೇತ್ರ ಮಾತ್ರ ಗೆಲ್ಲೋದು.ಕಡಿಮೆ ಸ್ಥಾನ ಬರುತ್ತದೆ ಎಂದು ಗೊತ್ತಾದ ಮೇಲೆಯೇ ಹೆಚ್ಚು ಸ್ಥಾನ ಬರುತ್ತೇವೆಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ‌ಇದು ಕೂಡ ಅವರ ತಂತ್ರಗಾರಿಕೆ.ಕರ್ನಾಟಕದಲ್ಲಿ ನನಗೆ ವಿಶ್ವಾಸ ಇದೆ 18ರಿಂದ 20 ಸ್ಥಾನ ಗೆಲ್ಲುತ್ತೇವೆ‌ಅವರು ಸಹ ಸರ್ವೆ ಮಾಡಿಸಿದ್ದಾರೆ.ಅವರು ಗೆಲ್ಲೋದೆ 200 ಒಳಗಡೆ ಮಾತ್ರ.ಕರ್ನಾಟಕದಲ್ಲಿ 18 ರಿಂದ 20 ಕ್ಷೇತ್ರ ಗೆದ್ದೆ ಗೆಲ್ಲುತ್ತೇವೆ.ಈ ಭಾರಿ ಬಿಜೆಪಿಯ ಸುಳ್ಳಿಗೆ ಯಾರುಯಾರು
Read More

ಮುಖ್ಯಮಂತ್ರಿಗಳ ಕಾರು ತಪಾಸಣೆ…ಚುನಾವಣಾಧಿಕಾರಿಗಳ ಕಟ್ಟುನಿಟ್ಟಿನ ಕ್ರಮ…

ಮೈಸೂರು,ಏ1,Tv10 ಕನ್ನಡ ಲೋಕಸಭೆ ಚುನಾವಣೆ ಹಿನ್ನಲೆ ಚುನಾವಣಾಧಿಕಾರಿಗಳು ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆಯನ್ನ ಬಿಗಿ ಮಾಡಿದ್ದಾರೆ.ಅಕ್ರಮವಾಗಿ ಹಣ ಸಾಗಿಸುವ ಖದೀಮರ ಮೇಲೆ ಹದ್ದಿನ ಕಣ್ಣಿಟ್ಟಿರುವ ಅಧಿಕಾರಿಗಳು ಯಾವುದೇ ಮುಲಾಜು ನೋಡದೆ ವಾಹನಗಳನ್ನ ತಪಾಸಣೆಗೆ ಒಳಪಡಿಸುತ್ತಿದ್ದಾರೆ.ಇದಕ್ಕೆ ಸಿಎಂ ವಾಹನವೂ ಹೊರತಾಗಿಲ್ಲ.ಇಂದು ಟಿ.ನರಸೀಪುರ ಮಾರ್ಗವಾಗಿ ಮೈಸೂರಿನತ್ತ ಬರುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಕಾರನ್ನ ಚಿಕ್ಕಹಳ್ಳಿ ಬಳಿ ಇರುವ ಚೆಕ್ ಪೋಸ್ಟ್ ನಲ್ಲಿ ತಡೆದು ತಪಾಸಣೆ ನಡೆಸಿದ್ದಾರೆ.ಅಲ್ಲದೆ ಸಿಎಂ ಜೊತೆ ಬಂದ ವಾಹನಗಳನ್ನೂ ಸಹ
Read More

ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಯದುವೀರ್…ಜ್ಯೋತಿಷಿಗಳ ಸೂಚನೆ ಮೇರೆಗೆ ಸಲ್ಲಿಕೆ…

ಮೈಸೂರು,ಏ1,Tv10 ಕನ್ನಡ ಜ್ಯೋತಿಷಿಗಳ ಸೂಚನೆಯಂತೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇಂದು ನಾಮಪತ್ರ ಸಲ್ಲಿಸಿದ್ದಾರೆ. ತಾಯಿ ಪ್ರಮೋದ ದೇವಿ ಒಡೆಯರ್, ಶಾಸಕ‌ ಶ್ರೀವತ್ಸ ಜೊತೆ ಸೇರಿ ನಾಮಪತ್ರ ಸಲ್ಲಿಸಿದ್ದಾರೆ.ಏ 3 ರಂದು ಬೃಹತ್ ರಾಲಿ ಮೂಲಕ ತೆರಳಿ ಮತ್ತೊಂದು ನಾಮಪತ್ರ ಸಲ್ಲಿಸಲಿದ್ದಾರೆ…
Read More

ಮೈಸೂರು:ಪಕ್ಷೇತರ ಅಭ್ಯರ್ಥಿ ಯಡೂರಪ್ಪರಿಂದ ನಾಮಪತ್ರ ಸಲ್ಲಿಕೆ..

ಮೈಸೂರು,ಏ1,Tv10 ಕನ್ನಡ ಮೈಸೂರು ಕೊಡಗು ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ ಇಂದು ಪಕ್ಷೇತರ ಅಭ್ಯರ್ಥಿಯಾಗಿ ಪಿ.ಎಸ್.ಯಡೂರಪ್ಪ ಅವರು ಇಂದು ಜಿಲ್ಲಾ ಚುನಾವಣಾಧಿಕಾರಿ ಡಾ: ಕೆ.ವಿ.ರಾಜೇಂದ್ರ ಅವರಿಗೆ ನಾಮಪತ್ರ ಸಲ್ಲಿಸಿದರು.
Read More

ಶ್ರೀನಿವಾಸ್ ಪ್ರಸಾದ್ ಬೆಂಬಲಕ್ಕಾಗಿ ಉಭಯ ಪಕ್ಷಗಳಿಂದ ಕಸರತ್ತು…ಪ್ರಸಾದ್ ಭೇಟಿಯಾಗಲಿದ್ದಾರಾ ಸಿಎಂ…?

ಮೈಸೂರು,ಏ1,Tv10 ಕನ್ನಡ ರಾಜಕೀಯ ಬದ್ದವೈರತ್ವವನ್ನ ಮರೆತು ಮತ್ತೆ ಒಂದಾಗಲಿದ್ದಾರೆಯೇ ಸಿದ್ದರಾಮಯ್ಯ ಹಾಗೂ ಶ್ರೀನಿವಾಸ್ ಪ್ರಸಾದ್…? ಇಂತಹ ಒಂದು ಕುತೂಹಲ ಪ್ರಶ್ನೆ ಇದೀಗ ಕಾಂಗ್ರೆಸ್ ಪಾಳೆಯದಲ್ಲಿ ಎದ್ದಿದೆ.ಇನ್ನೆರಡು ದಿನಗಳಲ್ಲಿ ಇಂತಹ ಬೆಳವಣಿಗೆ ಆಗಲಿದೆ ಎಂಬ ಮಾಹಿತಿಯೂ ಕಾಂಗ್ರೆಸ್ ಮೂಲಗಳಿಂದ ಬರುತ್ತಿದೆ.ದಶಕಗಳ ಹಿಂದೆ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಈ ಜೋಡಿ ಕೆಲವು ಬೆಳವಣಿಗೆಯಿಂದ ದೂರವಾಗಿ ರಾಜಕೀಯ ಬದ್ದವೈರಿಗಳಾಗಿದ್ದರು.ಸಿದ್ದತಾಮಯ್ಯ ಬೆಂಬಲಕ್ಕೆ ಸದಾ ನಿಲ್ಲುತ್ತಿದ್ದ ಶ್ರೀನಿವಾಸ್ ಪ್ರಸಾದ್ ರನ್ನ ಸಂಪುಟದಿಂದ ಕೈಬಿಟ್ಟಾಗ ಸಿಡಿದೆದ್ದರು.
Read More

ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಸಾಧನೆಗೈದ ಸರ್ಕಾರಿ ವಸತಿ ಶಾಲೆ ವಾರ್ಡನ್…ಅಭಿನಂದಿಸುವುದನ್ನೂ ಮರೆತ ಇಲಾಖೆ…

ನಂಜನಗೂಡು,ಏ1,Tv10 ಕನ್ನಡ ಸಾಧನೆಗೆ ಯಾವುದೇ ಮಿತಿ ಇಲ್ಲ,ಅಡ್ಡಿಯೂ ಇಲ್ಲ.ಮನಸ್ಸಿದ್ದರೆ ಮಾರ್ಗ ಎಂಬುದನ್ನ ನಿರೂಪಿಸಿದ್ದಾರೆ ನಂಜನಗೂಡು ತಾಲೂಕಿನ ಮಹದೇವನಗರ ಗ್ರಾಮದ ಮೂಳೆಗುಡ್ಡ ಬಳಿ ಇರುವ ಮುರಾರ್ಜಿ ದೇಸಾಯಿ ವಸತಿ ಪ್ರೌಢ ಶಾಲೆಯ ಮೇಲ್ವಿಚಾರಕ ಗಣಪತಿ ಜಕಾತಿ.ಸಾವಿರಾರು ಕಿಲೋಮೀಟರ್ ದೂರ ಇರುವ ಥೈಲ್ಯಾಂಡ್ ದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಚಕ್ರ ಎಸೆತ ಮತ್ತು 100 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಮಿಕ್ಸೆಡ್ ರಿಲೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ಭಾರತಕ್ಕೆ
Read More

ಜಗಳ ಬಿಡಿಸಲು ಬಂದ ಸರ್ಕಾರಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ…ಮಹಿಳೆ ವಿರುದ್ದ ಪ್ರಕರಣ ದಾಖಲು…

ಮೈಸೂರು,ಮಾ30,Tv10 ಕನ್ನಡ ಬಸ್ ನಲ್ಲಿ ಇಬ್ಬರು ಮಹಿಳೆಯರ ಮಧ್ಯೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ಕೆ.ಎಸ್.ಆರ್.ಟಿ.ಸಿ.ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆದಿದೆ.ಮಹಿಳೆ ಮೇಲೆ ಕಂಡಕ್ಟರ್ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೈಸೂರಿನಿಂದ ಮೇಲುಕೋಟೆಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ.ಬಸ್ ನಲ್ಲಿ ಜೆ.ಎಸ್.ಎಸ್.ಡೆಂಟಲ್ ಕಾಲೇಜು ಬಳಿ ಇಬ್ಬರು ಮಹಿಳೆಯರು ಜಗಳ ಆಡಿದ್ದಾರೆ.ಇಬ್ಬರನ್ನೂ ಸಮಾಧಾನಪಡಿಸಲು ಕಂಡಕ್ಟರ್ ಉದಯಕುಮಾರ್ ಯತ್ನಿಸಿದ್ದಾರೆ.ಈ ವೇಳೆ ಓರ್ವಮಹಿಳೆ ಉದಯಕುಮಾರ್ ಮೇಲೆ ಹಲ್ಲೆ ನಡೆಸಿ ಬಟ್ಟೆಗಳನ್ನ ಕಿತ್ತುಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.ಕಂಡಕ್ಟರ್ ನೆರವಿಗೆ ಬಂದ
Read More

ವಿಚ್ಛೇದನ ಪಡೆದಿದ್ದರೂ ಅತ್ತೆ,ಗಂಡನಿಂದ ಕಿರುಕುಳ ಆರೋಪ…ಗೃಹಿಣಿ ಆತ್ಮಹತ್ಯೆ…

ಮೈಸೂರು,ಮಾ30,Tv10 ಕನ್ನಡ ವಿಚ್ಛೇದನ ಪಡೆದಿದ್ದರೂ ಅತ್ತೆ ಹಾಗೂ ಗಂಡ ನೀಡಿದ ಮಾನಸಿಕ ಕಿರುಕುಳಕ್ಕೆ ಬೇಸತ್ತ ಗೃಹಿಣಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಜನತಾನಗರದಲ್ಲಿ ನಡೆದಿದೆ.ಲಕ್ಷ್ಮಿ(39) ಮೃತ ದುರ್ದೈವಿ.19 ವರ್ಷಗಳ ಹಿಂದೆ ನಾರಾಯಣ ಎಂಬಾತನನ್ನ ವಿವಾಹವಾಗಿದ್ದ ಲಕ್ಷ್ಮಿ ಎರಡು ಮಕ್ಕಳ ತಾಯಿ ಆಗಿದ್ದರು.ಕೌಟುಂಬಿಕ ಕಲಹ ಹಿನ್ನಲೆ ಇಬ್ಬರೂ ವಿಚ್ಛೇದನ ಪಡೆದಿದ್ದರು.ಹೀಗಿದ್ದರೂ ಇಬ್ಬರನ್ನ ಒಂದು ಮಾಡುವ ರಾಜಿ ಸಂಧಾನ ವಿಫಲವಾಗಿತ್ತು.ಮಕ್ಕಳು ಗಂಡನ ಜೊತೆ ಇದ್ದರು. ಜನತಾ ನಗರದ ಒಂದೇ ರಸ್ತೆಯಲ್ಲಿ
Read More

ಪತ್ನಿ ಆತ್ಮಹತ್ಯೆ…ಹೃದಯಾಘಾತದಿಂದ ಪತಿ ಸಾವು…ಸಾವಿನಲ್ಲೂ ಒಂದಾದ ದಂಪತಿ…

ಮೈಸೂರು,ಮಾ30,Tv10 ಕನ್ನಡ ಆತ್ಮಹತ್ಯೆಗೆ ಶರಣಾದ ಪತ್ನಿಯ ಸಾವಿನ ಸುದ್ದಿ ಅರಿತ ಪತಿ ಶಾಕ್ ನಿಂದ ಹೃದಯಾಘಾತಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀರಾಂಪುರದಲ್ಲಿ ನಡೆದಿದೆ.ವಿಜಯಲಕ್ಷ್ಮಿ(52) ಆತ್ಮಹತ್ಯೆಗೆ ಶರಣಾದ ಪತ್ನಿ.ಶಾಕ್ ನಿಂದ ಹೃದಯಾಘಾತಕ್ಕೆ ಪತಿ ಮಂಜುನಾಥ್(58) ಸಾವು. ವಿಜಯಲಕ್ಷ್ಮಿ ಅನಾರೋಗ್ಯದಿಂದ ಬಳಲುತ್ತಿದ್ದರು.ಚಿಕಿತ್ಸೆಯಿಂದ ಗುಣಮುಖರಾಗದ ಹಿನ್ನಲೆ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.ಪತ್ನಿಯ ಅಗಲಿಕೆ ಸುದ್ದಿ ಅರಿತ ಪತಿ ಮಂಜುನಾಥ್ ಹೃದಯಾಘಾತಕ್ಕೆ ಒಳಗಾಗಿದ್ದಾರೆ.ಕೂಡಲೇ ಮಂಜುನಾಥ್ ರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಚಿಕಿತ್ಸೆ
Read More