ಚಿಕಿತ್ಸೆ ಫಲಕಾರಿಯಾಗದೆ ಸಜಾ ಖೈದಿ ಕೆ.ಆರ್.ಆಸ್ಪತ್ರೆಯಲ್ಲಿ ಸಾವು…
ಮೈಸೂರು,ಜ7,Tv10 ಕನ್ನಡ ಹೊಟ್ಟೆ ನೋವಿನಿಂದ ಕೆ.ಆರ್.ಆಸ್ಪತ್ರೆ ದಾಖಲಾಗಿದ್ದ ಸಜಾ ಖೈದಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಮಾದೇಶ್(37) ಮೃತ ಖೈದಿ.ಡಿಸೆಂಬರ್ 29 ರಂದು ಆಸ್ಪತ್ರೆಗೆ ದಾಖಲಾಗಿದ್ದರು.ಪತ್ನಿಯನ್ನ ಕೊಲೆ ಮಾಡಿದ ಆರೋಪ ಸಾಬೀತಾಗಿ ಸಜಾ ಖೈದಿಯಾಗಿ ಮೈಸೂರಿನ ಕೇಂದ್ರ ಕಾರಾಗೃಹದ ಶಿಕ್ಷೆ ಅನುಭವಿಸುತ್ತಿದ್ದರು.ಮೂಲತಃ ಗುಂಡ್ಲುಪೇಟೆ ತಾಲೂಕಿನ ಮಾದೇಶ್ ಮೈಸೂರಿನ ಸಾತಗಳ್ಳಿ ಬಡಾವಣೆಯಲ್ಲಿ ವಾಸವಿದ್ದ ವೇಳೆ ಕೊಲೆ ಆರೋಪ ಹೊತ್ತಿದ್ದರು.ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
Read More