TV10 Kannada Exclusive

ಕಾವೇರಿ ಮಾತೆಗೆ ಸಿಎಂ ಸಿದ್ದರಾಮಯ್ಯ ರಿಂದ ಬಾಗಿನ ಸಮರ್ಪಣೆ…

ಮಂಡ್ಯ,ಜು29,Tv10 ಕನ್ನಡ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕೃಷ್ಣರಾಜಸಾಗರ ಜಲಾಶಯವು ತುಂಬಿರುವ ಶುಭ ಸಂದರ್ಭದಲ್ಲಿ ಕಾವೇರಿ ಮಾತೆಯ ಪೂಜೆ ಹಾಗೂ ಬಾಗಿನ ಸಮರ್ಪಣೆ ಕಾರ್ಯಕ್ರಮ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಅದ್ದೂರಿಯಿಂದ ನೆರವೇರಿತು.ಮುಖ್ಯಮಂತ್ರಿ ಸಿದ್ದರಾಮಯ್ಯ. ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್. ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಸೇರಿದಂತೆ ಸಚಿವರು, ಶಾಸಕರು, ಅಧಿಕಾರಿಗಳು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ಹಾಲು. ಪುಷ್ಪ ಸಮರ್ಪಿಸಿ ಬಾಗಿನ ಸಮರ್ಪಣೆ ಮಾಡಿದರು. ನಂತರ ವೇದಿಕೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ
Read More

ಕೆಆರ್ ಎಸ್ ಜಲಾಶಯದಿಂದ 1.30 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ…ನದಿಪಾತ್ರದ ಜನತೆಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ…

ಮಂಡ್ಯ,ಜು27,Tv10 ಕನ್ನಡಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆ ಕೆ.ಆರ್.ಎಸ್ ಜಲಾಶಯದಿಂದ 1,30,000 ಕ್ಯೂಸೆಕ್ಸ್ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತದೆ.ಹೀಗಾಗಿಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿನ ಕಾವೇರಿ ನದಿ ಪಾತ್ರದ ತಗ್ಗು ಪ್ರದೇಶದಲ್ಲಿರುವ ಹಾಗೂ ನದಿಯ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ಹಾಗೂ ರೈತರು ತಮ್ಮ ಆಸ್ತಿ ಪಾಸ್ತಿ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ವಹಿಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಧಿಕಾರಿ ಡಾ ಕುಮಾರ ಅವರು ಮನವಿ ಮಾಡಿದ್ದಾರೆ…
Read More

ಮುಡಾ ನಗರ ಯೋಜಕ ಸದಸ್ಯ ಶೇಷ ಅಮಾನತು ಆದೇಶ ರದ್ದು…ನಗರಾಭಿವೃದ್ದಿ ಕಾರ್ಯದರ್ಶಿಗೆ 5 ಸಾವಿರ ದಂಡ…

ಮೈಸೂರು,ಜು27,Tv10 ಕನ್ನಡನಕ್ಷೆ ಅನುಮೋದನೆ ಹಾಗೂ ಇನ್ನಿತರ ಕೆಲಸಗಳಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಆರೋಪದ ಮೇಲೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ನಗರ ಯೋಜಕ ಸದಸ್ಯ ಶೇಷ ರವರ ಅಮಾನತು ಆದೇಶವನ್ನ ಕರ್ನಾಟಕ ಆಡಳಿತ ನ್ಯಾಯಮಂಡಳಿ ವಜಾಗೊಳಿಸಿದೆ.ಈ ಸಂಭಂಧ ನಿಯಮಾನುಸಾರ ಪರಿಶೀಲನೆ ನಡೆಸದೆ ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನಲೆ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿಗೆ ಕೆಎಟಿ 5 ಸಾವಿರ ದಂಡ ವಿಧಿಸಿದೆ.ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ನಗರ ಯೋಜಕ ಸದಸ್ಯರಾಗಿದ್ದ ಆರ್.ಶೇಷ ರವರು ನಕ್ಷೆ
Read More

ಸರ್ಕಾರಿ ಜಮೀನು ಒತ್ತುವರಿ ತೆರುವು…ತಾಲೂಕು ಆಡಳಿತದಿಂದ ಕಾರ್ಯಾಚರಣೆ…

ಮೈಸೂರು,ಜು26,Tv10ಕನ್ನಡ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡ ಖಾಸಗಿ ವ್ಯಕ್ತಿಗಳಿಗೆ ತಾಲೂಕು ಆಡಳಿತ ಚಾಟಿ ಬೀಸಿದೆ.ಸರ್ಕಾರಿ ಜಮೀನಿನಲ್ಲಿ ನಿರ್ಮಿಸಲಾದ ರಸ್ತೆ ಹಾಗೂ ಕಟ್ಟಡಗಳನ್ನ ತೆರುವುಗೊಳಿಸಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಮೈಸೂರು ತಾಲೂಕು ವರುಣ ಹೋಬಳಿ ಚೋರನಹಳ್ಳಿ ಗ್ರಾಮದ ಸರ್ವೆ ನಂ.77,86,88,89 ಸರ್ಕಾರಿ(ಗೋಮಾಳ ಮತ್ತು ಹಳ್ಳ) ಜಮೀನಾಗಿದೆ.ಸದರಿ ಜಮೀನಿನಲ್ಲಿ ಬಿ.ವಿ.ಎಲ್.ಪ್ರೀಮಿಯೋ ಲೇಔಟ್ ನವರು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ರಸ್ತೆ ಹಾಗೂ ಕಟ್ಟಡ ನಿರ್ಮಿಸುತ್ತಿದ್ದರು.ಈ ಬಗ್ಗೆ ಬಂದ ದೂರಿನ ಅನ್ವಯ ತಹಸೀಲ್ದಾರ್ ಮಹೇಶ್ ಕುಮಾರ್ ದಾಖಲೆಗಳನ್ನ
Read More

ಬೆಳ್ಳಂಬೆಳಗ್ಗೆ ಭೂಗಳ್ಳರಿಗೆ ಶಾಕ್…ಸರ್ಕಾರಿ ಜಾಗದಲ್ಲಿ ನಿರ್ಮಿಸಿದ ಕಟ್ಟಡ ನೆಲಸಮ…ತಹಸೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ…

ಮೈಸೂರು,ಜು25,Tv10 ಕನ್ನಡಬೆಳ್ಳಂಬೆಳಗ್ಗೆ ಮೈಸೂರಿನಲ್ಲಿ ಭೂಗಳ್ಳರಿಗೆ ತಹಸೀಲ್ದಾರ್ ಮಹೇಶ್ ಕುಮಾರ್ ಶಾಕ್ ಕೊಟ್ಟಿದ್ದಾರೆ.ಸರ್ಕಾರಿ ಜಾಗವನ್ನ ಕಬಳಿಸಿ ಅಕ್ರಮವಾಗಿ ವಾಣಿಜ್ಯ ಮಳಿಗೆಗಳನ್ನ ನಿರ್ಮಿಸಿದ್ದ ಖದೀಮರಿಗೆ ಚಾಟಿಬೀಸಿದ್ದಾರೆ.ಸುಮಾರು 10 ರಿಂದ 12 ವಾಣಿಜ್ಯ ಮಳಿಗೆಗಳನ್ನ ತೆರುವುಗೊಳಿಸಿ ಕೋಟ್ಯಾಂತರ ಬೆಲೆಬಾಳುವ ಭೂಮಿಯನ್ನ ಸರ್ಕಾರದ ವಶಕ್ಕೆ ಪಡೆದಿದ್ದಾರೆ.ತಹಸೀಲ್ದಾರ್ ಮಹೇಶ್ ಕುಮಾರ್ ರವರು ಖುದ್ದು ಸ್ಥಳದಲ್ಲಿ ಹಾಜರಿದ್ದು ಒತ್ತುವರಿ ಕಾರ್ಯವನ್ನ ನಡೆಸಿದ್ದಾರೆ.ಮೈಸೂರು ತಾಲೂಕು ಇಲವಾಲ ಹೋಬಳಿ ಮಾದಗಳ್ಳಿ ಗ್ರಾಮ ಗದ್ದಿಗೆ ಮುಖ್ಯ ರಸ್ತೆ ಸರ್ವೆ ನಂ.54 ರಿಂದ 57
Read More

ಚಾಮುಂಡಿ ಬೆಟ್ಟ ಅನ್ನದಾಸೋಹ ಭವನಕ್ಕೆ ಶುದ್ಧ ನೀರಿನ RO plant ಸಮರ್ಪಣೆ…

ಮೈಸೂರು,ಜು25,Tv10 ಕನ್ನಡಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಮತ್ತು ಪ್ರವಾಸಿಗರ ಅನೂಕಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನ ವಿ-ಗಾರ್ಡ್ ಕಂಪನಿ ವತಿಯಿಂದ ಅನ್ನದಾಸೋಹ ಭವನದಲ್ಲಿ ಸ್ಥಾಪಿಸಿ ಇಂದು ಹಸ್ತಾಂತರಿಸಲಾಯಿತು.ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿಟಿ.ದೇವೆಗೌಡ ರವರು ಚಾಮುಂಡಿ ಬೆಟ್ಟಕ್ಕೆ ಮೂಲಭೂತ ಸೌಲಭ್ಯಗಳನ್ನ ಶಾಶ್ವತವಾಗಿ ಒದಗಿಸಲು ಸಿ.ಎಸ್. ಆರ್ ವಲಯ ಖಾಸಗಿ ಕಂಪನಿಗಳಿಗೆ ಮನವಿ ಮಾಡಿದ್ದರು, ಇದಕ್ಕೆ ಸ್ಪಂದಿಸಿದ ವಿ-ಗಾರ್ಡ್ ಕಂಪನಿ ಚಾಮುಂಡಿಬೆಟ್ಟಕ್ಕೆ ಪ್ರತಿನಿತ್ಯ ಆಗಮಿಸುವ ಭಕ್ತಾಧಿಗಳಿಗೆ ಸುಮಾರ 50ಸಾವಿರ ಮಂದಿಗೆ ಶುದ್ಧ ಕುಡಿಯುವ
Read More

ಪ್ರಿಯತಮೆ ಆತ್ಮಹತ್ಯೆ…ಪ್ರಿಯತಮ ನೇಣಿಗೆ…ಸಾವಿನಲ್ಲೂ ಒಂದಾದ ಪ್ರೇಮಿಗಳು…

ಮೈಸೂರು,ಜು25,Tv10 ಕನ್ನಡ ಪ್ರಿಯತಮೆ ಆತ್ಮಹತ್ಯೆಗೆ ಶರಣಾದ ಹಿನ್ನಲೆ ಪ್ರಿಯತಮನೂ ನೇಣಿಗೆ ಶರಣಾದ ದುರಂತ ಘಟನೆ ಮೈಸೂರಿನಲ್ಲಿ ನಡೆದಿದೆ.ಮೋನಿಕಾ(20) ಹಾಗೂ ಮನು(22) ಮೃತ ಪ್ರೇಮಿಗಳು.ಹತ್ತಿರದ ಸಂಭಂಧಿಗಳಾಗಿದ್ದ ಮಂಡಕಳ್ಳಿ ಗ್ರಾಮದ ನಿವಾಸಿ ಮೋನಿಕಾ ಹಾಗೂ ಮೈಸೂರಿನ ಜ್ಯೋತಿನಗರದ ಮನು ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದರು.ಮನೆಯಲ್ಲಿ ಇಬ್ಬರಿಗೂ ಮದುವೆ ಮಾಡಲು ಕುಟುಂಬಸ್ಥರು ತೀರ್ಮಾನಿಸಿದ್ದರು.ಇತ್ತೀಚೆಗೆ ಪ್ರೇಮಿಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಭಿನ್ನಾಭಿಪ್ರಾಯ ಬಂದಿದೆ.ಇಬ್ಬರ ನಡುವೆ ಸಣ್ಣ ಗಲಾಟೆ ಆಗಿದೆ.ಇದರಿಂದ ಬೇಸತ್ತ ಮೋನಿಕಾ ದಟ್ಟಗಳ್ಳಿಯ ಕೆಲಸ ಮಾಡುತ್ತಿದ್ದ
Read More

ವಾರಣಾಸಿಯ ಗಂಗಾರತಿ ಮಾದರಿಯಲ್ಲಿ ಕಾವೇರಿಗೆ ಆರತಿ…ಸಚಿವ ಡಿ.ಕೆ ಶಿವಕುಮಾರ್…

ಮಂಡ್ಯ,ಜು22,Tv10 ಕನ್ನಡರೈತರ ಜೀವನಾಡಿಯಾಗಿರುವ ಕಾವೇರಿ ತಾಯಿಗೆ ಪುಣ್ಯ ಕ್ಷೇತ್ರ ವಾರಣಾಸಿಯಲ್ಲಿ ಮಾಡುವ ಗಂಗಾರತಿ ಮಾದರಿಯಲ್ಲಿ ಕಾವೇರಿ ಮಾತೆಗೆ ಆರತಿ ಮಾಡಲು ಚಿಂತಿಸಲಾಗುತ್ತಿದೆ ಎಂದುಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.ಇಂದು ಕೃಷ್ಣರಾಜಸಾಗರ ಅಣೆಕಟ್ಟಿನ ಪರಿಶೀಲನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.ಕಾವೇರಿ ಆರತಿಯನ್ನು ಪ್ರಾರಂಭಿಸಲು ಮಂಡ್ಯ ಹಾಗೂ ಕೊಡಗು ಜಿಲ್ಲೆಯ ಸ್ಥಳೀಯ ಶಾಸಕರು ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳ ತಂಡ ರಚಿಸಿ ಕಾವೇರಿ ಆರತಿ ಪ್ರಾರಂಭಿಸಲು ಒಂದು ತಿಂಗಳೊಳಗೆ ವರದಿ ನೀಡುವಂತೆ
Read More

ಚಿಕಾಗೋ ದಲ್ಲಿ ಗೀತಾ ಉತ್ಸವ…ಗಣಪತಿಶ್ರೀಗಳ ನೇತೃತ್ವದಲ್ಲಿ ಅದ್ದೂರಿ ಕಾರ್ಯಕ್ರಮ…

ಮೈಸೂರು,ಜು21,Tv10 ಕನ್ನಡಚಿಕಾಗೋದ ನ್ಯೂ ಅರೆನಾದಲ್ಲಿ ನಡೆದ ಗೀತಾ ಉತ್ಸವ ಮನಸೂರೆಗೊಂಡಿದೆ.ಮೈಸೂರಿನ ಅವಧೂತ ದತ್ತ ಪೀಠದಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಯುಎಸ್ ನ ಇಲಿನಾಯಸ್ ನ ಚಿಕಾಗೋದ ನ್ಯೂ ಅರೆನಾದಲ್ಲಿ ಕಾರ್ಯಕ್ರಮ‌ಅದ್ದೂರಿಯಿಂದ ನೆರವೇರಿದೆ.ಎಸ್ ಜಿ ಎಸ್ ಗೀತಾ ಫೌಂಡೇಶನ್ ಮತ್ತು ಕೃಷ್ಣ ದತ್ತ ಹನುಮಾನ್ ದೇವಸ್ಥಾನ ವತಿಯಿಂದ ಅತಿದೊಡ್ಡ ಯುಎಸ್ ಗೀತಾ ಉತ್ಸವವನ್ನು ಆಯೋಜಿಸಲಾಗಿತ್ತು.ಕೇವಲ 10 ತಿಂಗಳಿನಲ್ಲಿ ವಿಧ್ಯಾರ್ಥಿಗಳು ಲ ಗೀತೆಯ ಎಲ್ಲಾ 700 ಶ್ಲೋಕಗಳನ್ನು ಕಂಠಪಾಠ
Read More

ಕೊನೆಗೂ ಎಚ್ಚೆತ್ತ ಜನಪ್ರತಿನಿಧಿಗಳು…ಜನರ ಸಂಕಷ್ಟ ಆಲಿಸಿದ ಶಾಸಕ ದರ್ಶನ್ ಧೃವನಾರಾಯಣ್…ಸಭೆಗೆ ಮಾತ್ರ ಸೀಮಿತವಾದ ಸಂಸದ ಸುನಿಲ್ ಬೋಸ್…

ನಂಜನಗೂಡು,ಜು21,Tv10 ಕನ್ನಡಕಪಿಲೆಯ ಪ್ರವಾಹಕ್ಕೆ ತತ್ತರಿಸಿರುವ ನಂಜನಗೂಡು ಜನರ ಸಂಕಷ್ಟಕ್ಕೆ ಶಾಸಕ ದರ್ಶನ್ ಧೃವನಾರಾಯಣ್ ಸ್ಪಂದಿಸಿದ್ದಾರೆ.ಆದ್ರೆ ಸಂಸದ ಸುನಿಲ್ ಬೋಸ್ ರವರು ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆದು ಕಾಲ್ಕಿತ್ತಿದ್ದಾರೆ.ಸುನಿಲ್ ಬೋಸ್ ರವರ ನಡೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.ಕಬಿನಿ ಜಲಾಶಯದಿಂದ ಹೊರಹರಿವು ಹೆಚ್ಚಾದ ಹಿನ್ನಲೆ ಕಪಿಲೆಯ ನದಿ ಪಾತ್ರದಲ್ಲಿರು ಜನ ತತ್ತರಿಸಿದ್ದಾರೆ.ತಗ್ಗು ಪ್ರದೇಶಗಳಿಗೆ ನುಗ್ಗಿ ನೀರು ಆಸ್ತಿಪಾಸ್ತಿಗಳನ್ನ ಅಪೋಷನ ತೆಗೆದುಕೊಂಡಿದೆ.ಮನೆ ಮಠಗಳಿಂದ ಹೊರಗುಳಿದ ಜನನಿರಾಶ್ರಿತರಾಗಿ ಗಂಜಿ ಕೇಂದ್ರ
Read More