TV10 Kannada Exclusive

ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ…

ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ… ಮೈಸೂರು,ಸೆ12,Tv10 ಕನ್ನಡಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ ನಡೆಸಿದ ಘಟನೆ ಹುಣಸೂರಿನಲ್ಲಿ ನಡೆದಿದೆ. ಲಿಂಗಾಪುರ ಗಿರಿಜನ ಹಾಡಿಯ ರಾಮಚಂದ್ರ ಗಂಭೀರವಾಗಿ ಗಾಯಗೊಂಡಿದ್ದಾರೆ.ನಾಗರಹೊಳೆ ರಾಷ್ಟೀಯ ಉದ್ಯಾನವನದ ಆನೆಚೌಕೂರು ವ್ಯಾಪ್ತಿಯಲ್ಲಿ ಬರುವ ಹಾಡಿಯಲ್ಲಿ ಘಟನೆ ನಡೆದಿದೆ.ಬೆಳಗ್ಗೆ ಬಹಿರ್ದೆಸೆಗೆ ತೆರಳಿದ್ದ ವೇಳೆ ಏಕೇಕಿ ಕರಡಿ ದಾಳಿ ನಡೆಸಿದೆ.ಈ ವೇಳೆ ಚೀರಾಡಿದ ಪರಿಣಾಮ ಹಾಡಿಯ ಜನ ಬಂದಿದ್ದಾರೆ.ಈ ವೇಳೆ ಬೆದರಿದ ಕರಡಿ ಕಾಡಿನತ್ತ ಓಡಿಹೋಗಿದೆ.ಗಾಯಾಳುವಿಗೆ ಪಿರಿಯಾಪಟ್ಟಣ
Read More

ಮಳೆ ಗಾಳಿಗೆ ಕುಸಿದುಬಿದ್ದ ಗರಡಿ ಮನೆ…ಪುನರ್ ನಿರ್ಮಾಣಕ್ಕಾಗಿ ಉಸ್ತಾದ್ ಗಳ ಒತ್ತಾಯ…

ಮಳೆ ಗಾಳಿಗೆ ಕುಸಿದುಬಿದ್ದ ಗರಡಿ ಮನೆ…ಪುನರ್ ನಿರ್ಮಾಣಕ್ಕಾಗಿ ಉಸ್ತಾದ್ ಗಳ ಒತ್ತಾಯ… ನಂಜನಗೂಡು,ಸೆ7,Tv10 ಕನ್ನಡನಿರಂತರವಾಗಿ ಸುರಿಯುತ್ತಿರುವ ಮಳೆಗೆ ನಂಜನಗೂಡಿನ ಶ್ರೀರಾಂಪುರ ಪಟ್ಟಣದಲ್ಲಿರುವ ಹತ್ತು ಜನ್ರ ಹಳೆ ಗರಡಿ ಮನೆ ಕುಸಿದುಬಿದ್ದಿದೆ.ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಗುರುತಿಸಲು ಹಲವಾರು ಕುಸ್ತಿಪಟುಗಳ ತಯಾರಿ ಮಾಡಿದ ಇನ್ನೂರು ವರ್ಷಗಳಿಗೂ ಅಧಿಕ ಕಾಲ ಪೈಲ್ವಾನ್ ರನ್ನ ಸಿದ್ದಪಡಿಸಿದ್ದ ಹತ್ತು ಜನರು ಹಳೆ ಗರಡಿ ಮನೆ ಇದೀಗ ನೆಲಸಮವಾಗಿದೆ.ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿ ಉತ್ತಮ ಗರಡಿ
Read More

ಮನೆ ಕುಸಿದು ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವು…ಮತ್ತೊಬ್ಬನಿಗೆ ಗಾಯ…

ಮನೆ ಕುಸಿದು ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವು…ಮತ್ತೊಬ್ಬನಿಗೆ ಗಾಯ… ಹೆಚ್.ಡಿ.ಕೋಟೆ,ಸೆ6,Tv10 ಕನ್ನಡಮನೆ ಕುಸಿದ ಪರಿಣಾಮ ಕೂಲಿ ಕಾರ್ಮಿಕ ಸಾವನ್ನಪ್ಪಿದ್ದು ಮತ್ತೋರ್ವ ಗಾಯಗೊಂಡ ಘಟನೆ ಹೆಚ್.ಡಿ.ಕೋಟೆ ಹೆಬ್ಬಲಗುಪ್ಪೆಯಲ್ಲಿ ನಡೆದಿದೆ.ಕುಳ್ಳುಯ್ಯ ಮೃತಪಟ್ಟ ದುರ್ದೈವಿ.ಬೋರಯ್ಯ ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ ಗಾಯಾಳು.ಶಿಥಿಲಗೊಂಡ ಗೋಡೆ ನಿರ್ಮಾಣ ಕೆಲಸ ಮಾಡುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
Read More

50 ಕೆ.ಜಿ.ತೂಕದ ಬೂದುಬಾಳೆ ಗೊನೆ ಫಲ…ದಾಖಲೆ ಬೆಳೆ ಬೆಳೆದ ಹುಣಸೂರು ನಿವಾಸಿ…

50 ಕೆ.ಜಿ.ತೂಕದ ಬೂದುಬಾಳೆ ಗೊನೆ ಫಲ…ದಾಖಲೆ ಬೆಳೆ ಬೆಳೆದ ಹುಣಸೂರು ನಿವಾಸಿ… ಹುಣಸೂರು,ಸೆ4,Tv10 ಕನ್ನಡಸಹಜವಾಗಿ 15 ರಿಂದ 20 ಕೆ.ಜಿ.ತೂಕದ ಬೂದು ಬಾಳೆ ಗೊನೆ ನೋಡಿದ್ದೇವೆ.ಆದ್ರೆ ಹುಣಸೂರಿನ ಬಿಳಿಕೆರೆಯ ಹುಸೇನ್ ಪುರ ಗ್ರಾಮದ ಮಂಜುನಾಥ್ ಎಂಬುವರ ಬಾಳೆ ತೋಟದಲ್ಲಿ ಬೆಳೆದ ಬೂದುಬಾಳೆ 50 ಕೆ.ಜಿ.ಗೂ ಹೆಚ್ಚು ತೂಕ ಹೊಂದಿದೆ.ಸಹಜವಾಗಿ ಬೂದುಬಾಳೆ ಗೊನೆಯಲ್ಕಿ 40 ರಿಂದ 50 ಹಣ್ಣು ಫಲ ನೀಡುತ್ತದೆ.ಆದ್ರೆ ಈ ಗೊನೆಯಲ್ಲಿ 120 ಕ್ಕೂ ಹೆಚ್ಚು ಹಣ್ಣುಗಳು ಇವೆ.ಮೈಸೂರು
Read More

ಮೈಸೂರು ತಾಲೂಕು ತಹಸೀಲ್ದಾರ್ ಬಿ.ಎನ್.ಗಿರೀಶ್ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆ…

ಮೈಸೂರು ತಾಲೂಕು ತಹಸೀಲ್ದಾರ್ ಬಿ.ಎನ್.ಗಿರೀಶ್ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆ… ಮೈಸೂರು,ಸೆ3,Tv10 ಕನ್ನಡಮೈಸೂರು ತಾಲೂಕು ತಹಸೀಲ್ದಾರ್ ಬಿ.ಎನ್.ಗಿರೀಶ್ ರವರು ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಸೆಪ್ಟೆಂಬರ್ 6 ರಂದು ಬೆಂಗಳೂರಿನ ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬಿ.ಎನ್.ಗಿರೀಶ್ ರವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.ದಾವಣಗೆರೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಪ್ರಶಸ್ತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.ಇದೀಗ ಬಿ.ಎನ್.ಗಿರೀಶ್ ರವರು
Read More

ಜಲಾವೃತವಾದ ಕಾಲೇಜು ಆವರಣ…ವಿಧ್ಯಾರ್ಥಿಗಳ ಪರದಾಟ…ಕಾಂಪೌಂಡ್ ಹತ್ತಿ ಕಾಲೇಜು ಪ್ರವೇಶ…

ಜಲಾವೃತವಾದ ಕಾಲೇಜು ಆವರಣ…ವಿಧ್ಯಾರ್ಥಿಗಳ ಪರದಾಟ…ಕಾಂಪೌಂಡ್ ಹತ್ತಿ ಕಾಲೇಜು ಪ್ರವೇಶ… ನಂಜನಗೂಡು,ಸೆ1,Tv10 ಕನ್ನಡಮೈಸೂರಿನಲ್ಲಿ ಮಳೆ ಅವಾಂತರಗಳು ಹೆಚ್ಚಾಗುತ್ತಿದೆ.ನಿರಂತರ ಮಳೆಯಿಂದಾಗಿ ನಂಜನಗೂಡಿನ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣಕೆರೆಯಂತಾಗಿದೆ.ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ವಿಧ್ಯಾರ್ಥಿಗಳು ಹಿಡಿಶಾಪ ಹಾಕಿದ್ದಾರೆ.ಕಾಲೇಜಿಗೆ ಹೋಗಲಾಗದೆ ವಿದ್ಯಾರ್ಥಿಗಳ ಪರದಾಡುತ್ತಿದ್ದಾರೆ.ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ದುಃಸ್ಥಿತಿ ಇದಾಗಿದೆ.ಸಾಮಾನ್ಯ ಮಳೆಗೆ ಕಾಲೇಜು ಆವರಣ ಸಂಪೂರ್ಣ ಕೆಸರು ಗದ್ದೆಯಾಗುತ್ತಧ.ಕಾಲೇಜು ಜೊತೆಗೆ ಸರ್ಕಾರಿ ಪ್ರೌಢಶಾಲೆಯು ಇದ್ದು ಶಾಲೆಗೂ ತೆರಳಲಾಗದೆ ವಿಧ್ಯಾರ್ಥಿಗಳು ಪರದಾಡುತ್ತಿದ್ದಾರೆ.ಶಾಲಾ
Read More

H1N1 ಗೆ ಮೈಸೂರಿನಲ್ಲಿ ಮೊದಲ ಬಲಿ…ಗರ್ಭಿಣಿ ಸಾವು…

H1N1 ಗೆ ಮೈಸೂರಿನಲ್ಲಿ ಮೊದಲ ಬಲಿ…ಗರ್ಭಿಣಿ ಸಾವು… ಮೈಸೂರು,ಸೆ1,Tv10 ಕನ್ನಡಮೈಸೂರಿ ಮಳೆ ಅವಾಂತರಗಳ ಮಧ್ಯೆ ಸಾಂಪ್ರಾದಾಯಿಕ ರೋಗಗಳ ಭೀತಿ ಶುರುವಾಗಿದೆ.ಹಂದಿ ಜ್ವರಕ್ಕೆ ಮೈಸೂರಲ್ಲಿ ಮೊದಲ ಬಲಿಯಾಗಿದೆ.ಎಚ್‌೧ಎನ್೧ನಿಂದ ಗರ್ಭಿಣಿ ಸಾವನ್ನಪ್ಪಿದ್ದಾರೆ.ಹುಣಸೂರಿನಕೋಣನಹೊಸಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.ಸ್ವಾಮಿನಾಯ್ಕ ಎಂಬವರ ಪುತ್ರಿ ಪುತ್ರಿ ಛಾಯಾ ಸಾವನ್ನಪ್ಪಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ…
Read More

ಹಳೇ ದ್ವೇಷ…ಇಬ್ಬರಿಗೆ ಚಾಕುವಿನಿಂದ ಇರಿತ…ಓರ್ವ ಸಾವು…ಮತ್ತೋರ್ವನ ಸ್ಥಿತಿ ಗಂಭೀರ…

ಹಳೇ ದ್ವೇಷ…ಇಬ್ಬರಿಗೆ ಚಾಕುವಿನಿಂದ ಇರಿತ…ಓರ್ವ ಸಾವು…ಮತ್ತೋರ್ವನ ಸ್ಥಿತಿ ಗಂಭೀರ… ಮೈಸೂರು,ಸೆಪ್ಟೆಂಬರ್1,Tv10 ಕನ್ನಡಹಳೇ ಧ್ವೇಷದ ಹಿನ್ನಲೆ ಇಬ್ಬರು ಯುವಕರಿಗೆ ಚಾಕು ಇರಿದ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಎಂ.ಹಳ್ಳಿಯಲ್ಲಿ ನಡೆದಿದೆ.ಚಾಕು ಇರಿತಕ್ಕೆ ಒಳಗಾದ ಓರ್ವ ಸಾವನ್ನಪ್ಪಿದ್ದು ಮತ್ತೋರ್ವನ ಸ್ಥಿತಿ ಗಂಭೀರ ಎಂದು ಹೇಳಲಾಗಿದೆ.ವೆಂಕಟೇಶ್@ಕರಿಯ ಮೃತಪಟ್ಟಿದ್ದು ನವೀನ್ ಸ್ಥಿತಿ ಗಂಭೀರವಾಗಿದೆ.ಚಾಕು ಇರಿದ ಆರೋಪಿಗಳಾದ ಚಂದ್ರು@ಚಿಕನ್ ಚಂದ್ರು ಮತ್ತು ಶೆಟ್ಟಿ ಪರಾರಿಯಾಗಿದ್ದಾರೆ. ಕೆ.ಎಂ.ಹಳ್ಳಿ ಅಶ್ವತ್ಥಕಟ್ಟೆ ಬಳಿ ನವೀನ್ ಹಾಗೂ ವೆಂಕಟೇಶ್ ರಾತ್ರಿ
Read More

ಬಾಲಕಿ ಮೇಲೆ ಕುಸಿದು ಬಿದ್ದ ಮನೆ…ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು…5 ಲಕ್ಷ ಪರಿಹಾರ ಘೋಷಣೆ…

ಬಾಲಕಿ ಮೇಲೆ ಕುಸಿದು ಬಿದ್ದ ಮನೆ…ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು…5 ಲಕ್ಷ ಪರಿಹಾರ ಘೋಷಣೆ… ನಂಜನಗೂಡು,ಆಗಸ್ಟ್30,Tv10 ಕನ್ನಡಬಾಲಕಿ ಮೇಲೆ ಮನೆ ಗೋಡೆ ಕುಸಿದು ಬಿದ್ದ ಘಟನೆ ನಂಜನಗೂಡು ತಾಲೂಕಿನ ಕಳಲೆ ಗ್ರಾಮದಲ್ಲಿ ನಡೆದಿದೆ.ಬಾಲಕಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.ನಿರಂತರ ಮಳೆಯಿಂದಾಗಿ ಮನೆ ಕುಸಿದಿದೆ.ಪೂರ್ಣಿ(3)ಪ್ರಾಣಾಪಾಯದಿಂದ ಉಳಿದ ಬಾಲಕಿ.ನಂಜುಂಡನಾಯಕ ಎಂಬುವರಿಗೆ ಸೇರಿದ ಮನೆ ಕುಸಿದಿದೆ.ಮಾಹಿತಿ ಅರಿತ ನಂಜನಗೂಡು ತಹಸೀಲ್ದಾರ್ ಶಿವಮೂರ್ತಿ ಹಾಗೂ ರೆವಿನ್ಯೂ ಇನ್ಸ್ಪೆಕ್ಟರ್ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಕ್ಷಣೆಯಾದ ಬಾಲಕಿಯ
Read More

ಧಾರಾಕಾರ ಮಳೆ ಚೆನ್ನಪಟ್ಟಣ ರೈಲ್ವೆ ನಿಲ್ದಾಣ ಜಲಾವೃತ…

ಧಾರಾಕಾರ ಮಳೆ ಚೆನ್ನಪಟ್ಟಣ ರೈಲ್ವೆ ನಿಲ್ದಾಣ ಜಲಾವೃತ… ಚೆನ್ನಪಟ್ಟಣ,ಆಗಸ್ಟ್29,Tv10 ಕನ್ನಡಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಪರಿಣಾಮ ಚೆನ್ನಪಟ್ಟಣ ರೈಲ್ವೆ ನಿಲ್ದಾಣ ಜಲಾವೃತವಾಯಿತು.ಕೆಲಕಾಲ ರೈಲು ಸಂಚಾರವೂ ವ್ಯತ್ಯಯವಾಯಿತು.ಮಳೆ ಪ್ರಮಾಣ ತಗ್ಗಿದ ನಂತರ ರೈಲು ಸಂಚಾರ ಆರಂಭಗೊಂಡಿತು…
Read More