TV10 Kannada Exclusive

ಮೈಸೂರು ಬೆಂಗಳೂರು ನೂತನ ದಶಪಥದಲ್ಲಿ ಮೊದಲನೇ ಭೀಕರ ಅಪಘಾತ

ಶ್ರೀರಂಗಪಟ್ಟಣ:-ಕಾರುಗಳ ನಡುವೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಮೂರು ಮಂದಿ ಗಾಯಗೊಂಡಿರುವ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿ ತಾಲೂಕಿನ ಗೌರಿಪುರ ಗ್ರಾಮದ ಬಳಿ ಇಂದು ಸಂಜೆ ನಡೆದಿದೆ.ಮಂಡ್ಯದ ಸ್ವರ್ಣಸಂದ್ರ ನಿವಾಸಿ ಶಿವಕುಮಾರ್ ಮೈಸೂರಿಗೆ ತೆರಳುತ್ತಿದ್ದ ವೇಳೆ ಮೈಸೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಮತ್ತೊಂದು ಕಾರಿಗೆ ಡಿವೈಡರ್ ಹಾರಿ ಡಿಕ್ಕಿ ಹೊಡೆದ ಪರಿಣಾಮ ಮೈಸೂರು ನಿವಾಸಿಗಳಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲಿಸಿ, ಚಿಕಿತ್ಸೆಗಾಗಿ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
Read More

ರಾಗಿ / ಭತ್ತ ಖರೀದಿ :ಫ್ರೂಟ್ ಐಡಿಯಲ್ಲಿ ನೋಂದಣಿಯಾಗಿರುವ ರೈತರ ಬ್ಯಾಂಕಿನ ಖಾತೆಗೆ ಹಣ ಜಮಾವಣೆ

ರಾಗಿ / ಭತ್ತ ಖರೀದಿ :ಫ್ರೂಟ್ ಐಡಿಯಲ್ಲಿ ನೋಂದಣಿಯಾಗಿರುವ ರೈತರ ಬ್ಯಾಂಕಿನ ಖಾತೆಗೆ ಹಣ ಜಮಾವಣೆ ಸಣ್ಣ ರೈತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ / ಭತ್ತ ಖರೀದಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ರೈತರುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ದಲ್ಲಾಳಿಗಳು ಭಾಗವಹಿಸುತ್ತಿರುತ್ತಾರೆಂದು ಮೌಖಿಕವಾಗಿ ದೂರುಗಳು ಜಿಲ್ಲಾಧಿಕಾರಿಗಳ ಕಛೇರಿಗೆ ಬಂದಿರುತ್ತವೆ. ಕೃಷಿ ಇಲಾಖೆಯವರು ನೀಡುವ ಫ್ರೂಟ್ ಐಡಿ ಆಧಾರದ ಮೇಲೆ ನೋಂದಣಿ ಹಾಗೂ ಖರೀದಿ
Read More

ಶ್ರೀಗಂಧ ಬೆಳೆ ಬೆಳೆದು ಶ್ರೀಮಂತರಾಗಿ: ನಿವೃತ್ತ ಐಎಎಸ್ ಅಧಿಕಾರಿ ಅಮರನಾರಾಯಣ್

ಶ್ರೀಗಂಧ ಬೆಳೆ ಬೆಳೆದು ಶ್ರೀಮಂತರಾಗಿ: ನಿವೃತ್ತ ಐಎಎಸ್ ಅಧಿಕಾರಿ ಅಮರನಾರಾಯಣ್ ಮಂಡ್ಯದ ರೈತರು ಭತ್ತ ಕಬ್ಬು ಬೆಳೆದು ಶ್ರೀಮಂತರಾಗಿರೋದು ಬಹಳ ಕಡಿಮೆ. ಆದ್ದರಿಂದ ಶ್ರೀಗಂಧ ಬೆಳೆ ಬೆಳೆದು ಶ್ರೀಮಂತರಾಗಿ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಹಾಗೂ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳಗಾರರ ಸಂಘದ ಅದ್ಯಕ್ಷರಾದ ಅಮರನಾರಾಯಣ್ ರೈತರಿಗೆ ಸಲಹೆ ನೀಡಿದರು. ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳಗಾರರ
Read More

ರಾಖಿ ಸಾವಂತ್ ಪತಿ ಆದಿಲ್ ಖಾನ್ ಮೈಸೂರು ಪೊಲೀಸ್ ಕಸ್ಟಡಿಗೆ…5 ದಿನಗಳ ಕಾಲ ವಿಚಾರಣೆ…

ರಾಖಿ ಸಾವಂತ್ ಪತಿ ಆದಿಲ್ ಖಾನ್ ಮೈಸೂರು ಪೊಲೀಸ್ ಕಸ್ಟಡಿಗೆ…5 ದಿನಗಳ ಕಾಲ ವಿಚಾರಣೆ… ಮೈಸೂರು,ಫೆ23,Tv10 ಕನ್ನಡ :ಬಾಲಿವುಡ್ ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್‌ ದುರಾನಿಯನ್ನ ಹೆಚ್ಚಿನ ವಿಚಾಣೆಗಾಗಿ ಮೈಸೂರು ಪೊಲೀಸರ ಕಸ್ಟಡಿಗೆ ನೀಡಲಾಗಿದೆ.ಮೈಸೂರಿನಲ್ಲಿ ವಿದೇಶಿ ಮಹಿಳೆಗೆ ವಂಚನೆ ಹಾಗೂ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಆದಿಲ್ ಖಾನ್ ಗೆಮೈಸೂರಿನ ವಿ ವಿ ಪುರಂ ಠಾಣಾ ಪೊಲೀಸರು ಆದಿಲ್ ಖಾನ್ ನನ್ನು 6 ನೇ ಅಪರ ಸಿವಿಲ್
Read More

ರೂಪಾ ಹಾಗೂ ಸಿಂಧೂರಿ ವರ್ಗಾವಣೆ…ಮಹಿಳಾ ಅಧಿಕಾರಿಗಳ ಜಟಾಪಟಿಗೆ ಬ್ರೇಕ್ ಹಾಕಿದ ಸರ್ಕಾರ…

ರೂಪಾ ಹಾಗೂ ಸಿಂಧೂರಿ ವರ್ಗಾವಣೆ…ಮಹಿಳಾ ಅಧಿಕಾರಿಗಳ ಜಟಾಪಟಿಗೆ ಬ್ರೇಕ್ ಹಾಕಿದ ಸರ್ಕಾರ… Tv10 ಕನ್ನಡಕೊನೆಗೂ ಸರ್ಕಾರ ಎಚ್ಚೆತ್ತುಕೊಂಡಿದೆ.ಸರ್ಕಾರಕ್ಕೆ ಮುಜುಗರ ತಂದ ಇಬ್ಬರು ಮಹಿಳಾ ಅಧಿಕಾರಿಗಳು ವರ್ಗಾವಣೆಯಾಗಿದ್ದಾರೆ.ಇವರ ಜೊತೆಗೆ ರೂಪಾ ಪತಿ ಮುನಿಶ್ ಮುದ್ಗಿಲ್ ಗೂ ವರ್ಗಾವಣೆಯಾಗಿದೆ.ಕೆಲವು ದಿನಗಳಿಂದ ರೋಹಿಣಿ ಸಿಂಧೂರಿ ಹಾಗೂ ಡಿ.ರೂಪಾ ನಡುವೆ ಬಹಿರಂಗವಾಗಿ ಜಟಾಪಟಿ ನಡೆಯಿತು.ರೋಹಿಣಿ ಸಿಂಧೂರಿ ರವರ ವೈಯುಕ್ತಿಕ ವಿಚಾರಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದ ರೂಪ ಸಾರ್ವಜನಿಕ ವಲಯದಲ್ಲಿ ಸಂಚಲನಕ್ಕೆ ಕಾರಣರಾಗಿದ್ದರು.ಹಿಂದೂ ರಿಲಿಜಿಯಸ್ ಅಂಡ್
Read More

ರಾಜ್ಯದ ಗಾಣಿಗ,ತೇಲಿ,ವನಿಯನ್, ಜ್ಯೋತಿನಗರ ಹಾಗೂ ಜ್ಯೋತಿನಗರ ವೈಶ್ಯ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಗಾಣಿಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಆದೇಶ ಹೊರಡಿಸಲಾಗಿದೆ.”

ರಾಜ್ಯದ ಗಾಣಿಗ,ತೇಲಿ,ವನಿಯನ್, ಜ್ಯೋತಿನಗರ ಹಾಗೂ ಜ್ಯೋತಿನಗರ ವೈಶ್ಯ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಗಾಣಿಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಆದೇಶ ಹೊರಡಿಸಲಾಗಿದೆ.” ಮುಖ್ಯಮಂತ್ರಿ @BSBommai
Read More

ಮುಖ್ಯಮಂತ್ರಿ @BSBommai ಅವರ ಅಧ್ಯಕ್ಷತೆಯಲ್ಲಿ ಇಂದು ಸಮಾಜ ಕಲ್ಯಾಣ ಇಲಾಖೆಯ ರಾಜ್ಯ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ

ಮುಖ್ಯಮಂತ್ರಿ @BSBommai ಅವರ ಅಧ್ಯಕ್ಷತೆಯಲ್ಲಿ ಇಂದು ಸಮಾಜ ಕಲ್ಯಾಣ ಇಲಾಖೆಯ ರಾಜ್ಯ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ಜರುಗಿತು.
Read More

ಶ್ರೀ ಸ್ವಾಮಿನಾರಾಯಣ ಗುರುಕುಲ ಅಂತರಾಷ್ಟ್ರೀಯ ಶಾಲೆ ಲೋಕಾರ್ಪಣೆ

ಶ್ರೀ ಸ್ವಾಮಿನಾರಾಯಣ ಗುರುಕುಲ ಅಂತರಾಷ್ಟ್ರೀಯ ಶಾಲೆ ಲೋಕಾರ್ಪಣೆ ಸಂಸ್ಕೃತಿ ಗಾಗಿ ಮೈಸೂರು ಸಂಸ್ಕಾರಕ್ಕಾಗಿ ಗುರುಕುಲ ಎಂಬ ಧ್ಯೇಯ ವಾಕ್ಯದೊಂದಿಗೆ ಹಸಿರು ಹೊತ್ತ ಪ್ರಕೃತಿಯ ನಡುವೆ ಕಾವೇರಿ ನದಿಯ ಮಡಿಲಿನಲ್ಲಿ ಶ್ರೀ ಸ್ವಾಮಿನಾರಾಯಣ ಗುರುಕುಲ ಅಂತರಾಷ್ಟ್ರೀಯ ಶಾಲೆಯು ಕೆ ಆರ್‌ಎಸ್‌ ರಸ್ತೆ ಬೆಳಗೊಳದಲ್ಲಿ ಲೋಕಾರ್ಪಣೆಗೆ ಸಿದ್ದಗೊಂಡಿದ್ದು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ರವರು ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು ಈ ಲೋಕಾರ್ಪಣೆ ಕಾರ್ಯಕ್ರಮದಲ್ಲಿ
Read More

ಏಕಾಗ್ರತೆ ಸಾಧನೆಗೆ ಸೋಪಾನ: ಲಯನ್ ಸಿ.ಆರ್ .ದಿನೇಶ್

ಏಕಾಗ್ರತೆ ಸಾಧನೆಗೆ ಸೋಪಾನ: ಲಯನ್ ಸಿ.ಆರ್ .ದಿನೇಶ್ ಬೂಕನಕೆರೆ : ವಿದ್ಯಾರ್ಥಿಗಳು ಆಸಕ್ತಿಯಿಂದ ಓದಬೇಕು. ಯಾವುದೇ ವಿಷಯದ ಮೇಲಾಗಲಿ ಏಕಾಗ್ರತೆ ಇರಬೇಕು. ಏಕೆಂದರೆ ಏಕಾಗ್ರತೆ ಸಾಧನೆಗೆ ಸೋಪಾನ ಎಂದು ಬಲ್ಲೇನಹಳ್ಳಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲಯನ್ ಸಿ.ಆರ್ .ದಿನೇಶ್ ರವರು ವಿದ್ಯಾರ್ಥಿಗಳಿಗೆ ತಿಳಿಸಿದರು. ಇಂದು ಕಾಲೇಜಿನಲ್ಲಿ ನಡೆದ ಕಾಲೇಜಿನ ವಾರ್ಷಿಕೋತ್ಸವ,ಶಾರದಾ ಪೂಜೆ ಮತ್ತು ದ್ವಿತೀಯ ಪಿ.ಯು.ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಕಾರ್ಯಕ್ರಮದ ಉದ್ಘಾಟನೆಯನ್ನು ವಹಿಸಿ ಮಾತನಾಡಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಗೆ
Read More

ವಿದ್ಯಾರ್ಥಿಗಳು ಕಲಿಕೋತ್ಸಾಹದಿಂದ ಮುನ್ನಡೆಯಬೇಕು: ಎನ್.ಎಂ.ಶಿವಪ್ರಕಾಶ್.

ವಿದ್ಯಾರ್ಥಿಗಳು ಕಲಿಕೋತ್ಸಾಹದಿಂದ ಮುನ್ನಡೆಯಬೇಕು: ಎನ್.ಎಂ.ಶಿವಪ್ರಕಾಶ್. ಕೆ.ಆರ್.ಪೇಟೆ: ಪರೀಕ್ಷೆ ಎಂಬುದು ಭವಿಷ್ಯ ಕಟ್ಟಿಕೊಡುವ ಭವ್ಯ ಮಂದಿರದಂತೆ. ಸಮಾಧಾನದ ಅಧ್ಯಯನದ ಮೂಲಕ ಅದನ್ನು ಪ್ರವೇಶಿಸಿ ಸಾಧನೆ ಮಾಡಬೇಕು. ಅದಕ್ಕಾಗಿ ವಿದ್ಯಾರ್ಥಿಗಳು ಕಲಿಕೋತ್ಸಾಹದಿಂದ ಮುನ್ನಡೆಯಬೇಕು ಎಂದು ಪಾಂಡವಪುರದ ಸ.ಪ.ಪೂ.ಕಾಲೇಜಿನ ಉಪನ್ಯಾಸಕರಾದ ಎನ್.ಎಂ.ಶಿವಪ್ರಕಾಶ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಬಲ್ಲೇನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವದಲ್ಲಿ ಸಮಾರೋಪ ಭಾಷಣ ಮಾಡಿದರು. ಗುರುಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಗುರಿಯನ್ನು ತಲುಪಬೇಕು. ಉತ್ಸಾಹ ಮತ್ತು ಆಸಕ್ತಿಯಿಂದ ಮಾತ್ರ
Read More