ಕಾಡಾನೆ ದಾಳಿಗೆ ರೈತ ಬಲಿ…
ಸರಗೂರು,ಸೆ15,Tv10 ಕನ್ನಡ ಕಾಡಾನೆಯ ತುಳಿತಕ್ಕೆ ರೈತ ಬಲಿಯಾದ ಘಟನೆ ಸರಗೂರು ತಾಲೂಕಿನ ಚೆನ್ನಗುಂಡಿ ಗ್ರಾಮದಲ್ಲಿ ನಡೆದಿದೆ.ಬೆಳಗ್ಗೆ ತಮ್ಮ ಜಮೀನಿನಲ್ಲಿ ಹತ್ತಿ ಬಿಡಿಸಲು ತೆರಳಿದ ವೇಳೆ ದುರ್ಘಟನೆ ನಡೆದಿದೆ.ಚನ್ನಗುಂಡಿ ಗ್ರಾಮದ ಮಹೇಂದ್ರ (35) ಮೃತ ರೈತ.ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಚೆನ್ನಗುಂಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆಯಿಂದ ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳನಿರ್ಲಕ್ಷಕ್ಕೆ ರೈತ ಬಲಿಯಾಗಿದ್ದಾನೆಎಂದು ಆರೋಪಿಸಿದ್ದಾರೆ. ಸರಗೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…
Read More