TV10 Kannada Exclusive

–ಅರಮನೆ ಭದ್ರಕೋಟೆ ಕುಸಿದುಬಿದ್ದ ಗೋಡೆಗೆ ಕಾಯಕಲ್ಪ…ಕಾಮಗಾರಿ ಪೂರ್ಣ*

ಅರಮನೆ ಭದ್ರಕೋಟೆ ಕುಸಿದುಬಿದ್ದ ಗೋಡೆಗೆ ಕಾಯಕಲ್ಪ…ಕಾಮಗಾರಿ ಪೂರ್ಣ… ಮೈಸೂರು,ಜೂ28,ಸುಮಾರು 6 ತಿಂಗಳ ಹಿಂದೆ ನಿರಂತರ ಮಳೆಗೆ ಕುಸಿದು ಬಿದ್ದಿದ್ದ ಅರಮನೆ ಭಧ್ರಕೋಟೆ ಗೋಡೆಗೆ ಕಾಯಕಲ್ಪ ಒದಗಿಸಲಾಗಿದೆ.ಕಾಮಗಾರಿ ಪೂರ್ಣಗೊಂಡಿದ್ದು ಯಥಾಸ್ಥಿತಿಗೆ ತರಲಾಗಿದೆ.ಅರಮನೆ ಉತ್ತರ ದಿಕ್ಕಿ ಜಯಮಾರ್ತಾಂಡ ಧ್ವಾರ ಹಾಗೂ ಕೋಟೆ ಮಾರಮ್ಮ ದೇವಸ್ಥಾನದ ನಡುವಿನ ಗೋಡೆಯ ಒಂದು ಭಾಗದಲ್ಲಿ ಗೋಡೆ ಕುಸಿದಿತ್ತು.ಅರಮನೆ ಆಡಳಿತ ಮಂಡಳಿ ವತಿಯಿಂದ ಪುನರ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.ನುರಿತ ಇಂಜಿನಿಯರ್ ಗಳ ಉಸ್ತುವಾರಿಯಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು.ಪಾರಂಪರಿಕತೆಗೆ ಆಧ್ಯತೆ ನೀಡಿ
Read More

*ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಹಾಸನಕ್ಕೆ ಭೇಟಿ ನೀಡಿದ @siddaramaiah ಅವರನ್ನು ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲಾ ಪಂಚಾಯತ್ ಮುಖ್ಯ

*ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಹಾಸನಕ್ಕೆ ಭೇಟಿ ನೀಡಿದ @siddaramaiah ಅವರನ್ನು ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಹರಿರಾಮ್ ಶಂಕರ್ ಅವರು ಸ್ವಾಗತಿಸಿದರು. ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಈ ವೇಳೆ ಹಾಜರಿದ್ದರು*
Read More

ಕೆಂಪೇಗೌಡ ಜಯಂತಿ…ಮೈಸೂರಿನಲ್ಲಿ ಅದ್ದೂರಿ ಮೆರವಣಿಗೆ…

ಕೆಂಪೇಗೌಡ ಜಯಂತಿ…ಮೈಸೂರಿನಲ್ಲಿ ಅದ್ದೂರಿ ಮೆರವಣಿಗೆ… ಮೈಸೂರು,ಜೂ27,Tv10 ಕನ್ನಡಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಪ್ರಭು ಕೆಂಪೇಗೌಡ ರವರ ಜಯಂತಿಯನ್ನ ಅದ್ದೂರಿಯಾಗಿ ಆಚರಿಸಲಾಗಿದೆ. ಕೆಂಪೇಗೌಡ ಜಯಂತಿ ಅಂಗವಾಗಿ ಅದ್ದೂರಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ‌ ಆರಂಭವಾದ ಮೆರವಣಿಗೆ ಕಲಾಮಂದಿರದ ಬಳಿ ಅಂತ್ಯವಾಯಿತು.ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಸಿ‌ ಮಹದೇವಪ್ಪ ರವರು ಮೆರವಣಿಗೆಗೆ ಚಾಲನೆ ನೀಡಿದರು.ಸಂಸದ ಪ್ರತಾಪಸಿಂಹ ಶಾಸಕರಾದ ಜಿ ಟಿ ದೇವೇಗೌಡ ಪುತ್ರ ಶಾಸಕ ಹರೀಶ್ ಗೌಡಚಾಮರಾಜ
Read More

ಬಕ್ರೀದ್ ಹಿನ್ನಲೆ…ನಗರ ಪೊಲೀಸ್ ಆಯುಕ್ತರಿಂದ ಶಾಂತಿ ಸಭೆ…

ಮೈಸೂರು,ಜೂ26,Tv10 ಕನ್ನಡಜೂನ್ 29 ರಂದು ಬಕ್ರೀದ್ ಹಬ್ಬ ಆಚರಣೆ ಹಿನ್ನಲೆ ನಗರ ಪೊಲೀಸ್ ಆಯುಕ್ತರಾದ ಡಾ.ಬಿ.ರಮೇಶ್ ರವರು ತಮ್ಮ ಕಚೇರಿಯಲ್ಲಿ ಶಾಂತಿ ಸಭೆ ನಡೆಸಿದರು.ಹಿಂದು ಹಾಗೂ ಮುಸ್ಲಿಂ ಜನಾಂಗದ ಮುಖಂಡರೊಂದಿಗೆ ಚರ್ಚಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಕೆಲಸಗಳಿಗೆ ಆಸ್ಪದ ನೀಡಬಾರದೆಂದು ಮುಖಂಡರಿಗೆ ತಿಳಿಹೇಳಿದರು.ಪ್ರಾರ್ಥನಾ ಸ್ಥಳಗಳ ಬಳಿ ವಾಹನಗಳ ಸುಗಮ ಸಂಚಾರಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು ಸಭೆಯಲ್ಲಿ ಡಿಸಿಪಿ ಮುತ್ತುರಾಜ್ ಹಾಗೂ ಜಾಹ್ನವಿ,ನಗರ ಪಾಲಿಕೆ ಸದಸ್ಯರು,ವಿವಿದ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್
Read More

ಮಳೆಗಾಗಿ ಕಪ್ಪೆಗಳ ಮದುವೆ…ಹುಣಸೂರಿನಲ್ಲಿ ಆಚರಣೆ…

ಹುಣಸೂರು,ಜೂ25,Tv10 ಕನ್ನಡಮುಂಗಾರು ಮಳೆ ರಾಜ್ಯದಲ್ಲಿ ಕೈಕೊಟ್ಟಿದೆ.ಜನ ಕಂಗಾಲಾಗಿದ್ದಾರೆ.ಮಳೆಗಾಗಿ ಎಲ್ಲೆಡೆ ವಿಶೇಷ ಪೂಜೆಗಳು ಆರಂಭವಾಗಿದೆ.ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಚಿಕ್ಕೇಗೌಡನ ಕೊಪ್ಪಲಿನಲ್ಲಿ ಮಳೆಗಾಗಿ ವಿಶೇಷ ಆಚರಣೆ ಮಾಡಲಾಗಿದೆ.ಕಪ್ಪೆಗಳ ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ.ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಪ್ಪೆಗಳ ಮೆರವಣಿಗೆ ಮಾಡಲಾಗಿದೆ.ಎರಡು ಕಪ್ಪೆಗಳನ್ನು ಬಿದಿರಿನ ಬೊಂಬಿಗೆ ಕಟ್ಟಿ ಮೆರವಣಿಗೆ ಮಾಡಿದ್ದಾರೆ.ವಿವಸ್ತ್ರರಾದ ಬಾಲಕರಯ ಕಪ್ಪೆಗಳನ್ನು ಹೊತ್ತು ಸಾಗಿದ್ದಾರೆ…
Read More

ಡಾ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಜಿಪಂ ಸಿಇಓ ಭೇಟಿ… ಮೂಲಭೂತ ಸೌಕರ್ಯಗಳ ಪರಿಶೀಲನೆ…

ಡಾ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಜಿಪಂ ಸಿಇಓ ಭೇಟಿ… ಮೂಲಭೂತ ಸೌಕರ್ಯಗಳ ಪರಿಶೀಲನೆ… ಮೈಸೂರು,ಜೂ24,Tv10 ಕನ್ನಡಮೈಸೂರಿನ ಗಾಂಧಿನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ ಎಮ್ ಗಾಯತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು ಒಂದುವರೆ ಗಂಟೆಗೂ ಹೆಚ್ಚು ಕಾಲ ಮಕ್ಕಳೊಡನೆ ಬೆರೆತು ಮೂಲಭೂತ ಸೌಕರ್ಯ ಬಗ್ಗೆ ಮಾಹಿತಿ ಪಡೆದುಕೊಂಡರು. ಬಾಡಿಗೆ ಕಟ್ಟಡದಲ್ಲಿ ಸ್ಥಳಾವಕಾಶದ ಕೊರತೆ ಇರುವುದನ್ನು ಗಮನಿಸಿ ಯಾವುದಾದರೂ ದೊಡ್ಡ ಕಟ್ಟಡಕ್ಕೆ ಸ್ಥಳಾಂತರ ಮಾಡುವಂತೆ
Read More

ಮಳೆಗಾಗಿ ಮಕ್ಕಳ ಮದುವೆ…ಹುಡುಗನಿಗೆ ಹೆಣ್ಣು ವೇಷ ಧರಿಸಿ ವಿವಾಹ…ಕೆ.ಆರ್.ಪೇಟೆಯಲ್ಲೊಂದು ಸಂಪ್ರದಾಯ…

ಮಳೆಗಾಗಿ ಮಕ್ಕಳ ಮದುವೆ…ಹುಡುಗನಿಗೆ ಹೆಣ್ಣು ವೇಷ ಧರಿಸಿ ವಿವಾಹ…ಕೆ.ಆರ್.ಪೇಟೆಯಲ್ಲೊಂದು ಸಂಪ್ರದಾಯ… ಮಂಡ್ಯ,ಜೂ24,Tv10 ಕನ್ನಡರಾಜ್ಯದ ಕೆಲವೆಡೆ ಪ್ರಸಕ್ತ ಸಾಲಿನಲ್ಲಿ ಮಳೆ ಕೈ ಕೊಟ್ಟಿದೆ.ಮಳೆಗಾಗಿ ಜನ ವಿಶೇಷ ಸಂಪ್ರದಾಯಗಳಿಗೆ ಮೊರೆ ಹೋಗಿದ್ದಾರೆ.ಮಳೆಗಾಗಿ ಮಂಡ್ಯದ ಕೆ.ಆರ್.ಪೇಟೆಯ ಗಂಗನಹಳ್ಳಿಯಲ್ಲಿ ವಿಚಿತ್ರ ಸಂಪ್ರದಾಯ ಆಚರಿಸಲಾಗಿದೆ.ರಾತ್ರಿ ವೇಳೆ ಮಕ್ಕಳ ಮದುವೆ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥಿಸಲಾಗಿದೆ.ಎರಡು ಗಂಡು ಮಕ್ಕಳಲ್ಲಿ ಒಂದು ಗಂಡು ಮಗುವಿಗೆ ಹೆಣ್ಣಿನ ವೇಷ ಧರಿಸಿ‌ ಮದುವೆ ಮಾಡಲಾಗಿದೆ.ಮದುವೆಯ ಬಳಿಕ ಗ್ರಾಮದ ನಿವಾಸಿಗಳಿಗೆ ಭೋಜನ ವ್ಯವಸ್ಥೆಯನ್ನೂ ಸಹ
Read More

ಮೈಸೂರು ದಕ್ಷಿಣವಲಯ ಡಿಐಜಿಪಿ ಯಾಗಿ ಡಾ.ಬೋರಲಿಂಗಯ್ಯ ಅಧಿಕಾರ ಸ್ವೀಕಾರ…ಎಸ್ಪಿ ಸೀಮಾ ಲಾಟ್ಕರ್ ರಿಂದ ಹಸ್ತಾಂತರ…

ಮೈಸೂರು,ಜೂ23,Tv10 ಕನ್ನಡಮೈಸೂರು ದಕ್ಷಿಣ ವಲಯ ಡಿಐಜಿಪಿ ಯಾಗಿ ಡಾ.ಎಸ್.ಬೋರಲಿಂಗಯ್ಯ ಇಂದು ಅಧಿಕಾರ ಸ್ವೀಕರಿಸಿದರು.ಹಿಂದಿನ ಡಿಐಜಿಪಿ ಪ್ರವೀಣ್ ಮಧುಕರ್ ಪವಾರ್ ರವರು ವರ್ಗಾವಣೆ ಹಿನ್ನಲೆ ಡಾ.ಬೋರಲಿಂಗಯ್ಯ ರವರನ್ನ ನೇಮಕ ಮಾಡಿ ಆದೇಶ ಹೊರಡಿಸಲಾಗಿದ್ದು ಇಂದು ಅಧಿಕಾರ ಸ್ವೀಕರಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ರವರು ಹೂಗುಚ್ಚ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು…
Read More

ಲೋಕಾಯುಕ್ತ ಬಲೆಗೆ ಪಾಂಡವಪುರ ತಹಸೀಲ್ದಾರ್ ಸೌಮ್ಯ…40 ಸಾವಿರ ಲಂಚ ಪಡೆಯವ ವೇಳೆ ದಾಳಿ…

ಲೋಕಾಯುಕ್ತ ಬಲೆಗೆ ಪಾಂಡವಪುರ ತಹಸೀಲ್ದಾರ್ ಸೌಮ್ಯ…40 ಸಾವಿರ ಲಂಚ ಪಡೆಯವ ವೇಳೆ ದಾಳಿ… ಮಂಡ್ಯ,ಜೂ22,Tv10 ಕನ್ನಡವಿಎ ವರ್ಗಾವಣೆಗೆ 40 ಸಾವಿರ ಲಂಚ ಪಡೆಯುವ ವೇಳೆ ತಹಸೀಲ್ದಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ತಹಶೀಲ್ದಾರ್ಕೆ.ಸಿ.ಸೌಮ್ಯ ಲೋಕಾಯುಕ್ತ ಬಲೆಗೆ ಬಿದ್ದವರು ಡಿವೈಎಸ್ಪಿ ಸುನಿಲ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದೆ.ಕಚೇರಿಯಲ್ಲೇ ಲಂಚ ಪಡೆಯುವ ವೇಳೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ.ವಿಎ ಮರಿಸ್ವಾಮಿ ಎಂಬುವರ ವರ್ಗಾವಣೆಗೆ 40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ವಿಎ
Read More

ಕೌಟುಂಬಿಕ ಕಲಹ… ಪತ್ನಿ,ಮಕ್ಕಳ ಮೇಲೆ ಪತಿಯಿಂದ ಹಲ್ಲೆ… ಇಬ್ಬರು ಮಕ್ಕಳು ಸಾವು…ಹೆಂಡತಿಗೆ ಗಂಭೀರ ಗಾಯ…

ಮಂಡ್ಯ,ಜೂ22,Tv10 ಕನ್ನಡಕೌಟುಂಬಿಕ ಕಲಹ ಹಿನ್ನಲೆ ಪತಿರಾಯ ತನ್ನೆರಡು ಮಕ್ಕಳನ್ನು ಬರ್ಬರವಾಗಿ ಕೊಂದು ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮಂಡ್ಯ ಜಿಲ್ಲೆಮರಳಗಾಲದಲ್ಲಿ ತಡರಾತ್ರಿ ನಡೆದಿದೆ.ತೋಟದ ಮನೆಯಲ್ಲಿ ವಾಸವಿದ್ದ ಗುಲ್ಬರ್ಗಾ ಮೂಲದ ಕುಟುಂಬ.ಘಟನೆಯಲ್ಲಿ ಆದರ್ಶ(04), ಅಮೂಲ್ಯ(03) ಧಾರುಣವಾಗಿ ಸಾವನ್ನಪ್ಪಿದ್ದಾರೆ.ಸುತ್ತಿಗೆಯಿಂದ ಹೆಂಡತಿ ಲಕ್ಷ್ಮಿ(23) ಮಕ್ಕಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ ಗಾಯಗೊಂಡ ಲಕ್ಷ್ಮಿಯನ್ನ ಆಸ್ಪತ್ರೆಗೆ ರವಾನಿಸಲಾಗಿದೆ.ಪತಿ ಶ್ರೀಕಾಂತ್ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್
Read More